ಅಲ್ಲಮ ಪ್ರಭು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಅಲ್ಲಮ ಪ್ರಭು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮಂಗಳವಾರ, ಡಿಸೆಂಬರ್ 11, 2012

ಗೀತವೆಲ್ಲಾ ಒಂದು ಮಾತಿನೊಳಗು

ಎರಡೆಂಬತ್ತು ಕೋಟಿ ವಚನವ ಹಾಡಿ
ಹಲವ ಹಂಬಲಿಸಿತ್ತೆನ್ನಮನವು,
ಮನ ಘನವನರಿಯದು, ಘನ ಮನವನರಿಯದು
ಗುಹೇಶ್ವರನೆಂಬ ಲಿಂಗವನರಿದ ಬಳಿಕ
ಗೀತವೆಲ್ಲಾ ಒಂದು ಮಾತಿನೊಳಗು

...... ಅಲ್ಲಮ ಪ್ರಭು

ಸೋಮವಾರ, ಡಿಸೆಂಬರ್ 13, 2010

ಕುರುಹು ಹಿಡಿದ ಕಾರಣ!

ಅರಿಯದ ಕಾರಣ ಕುರುಹುವಿಡಿವೆನಲ್ಲದೆ
ಅರಿದ ಬಳಿಕ ಇನ್ನೇನೊ ?
ಬಿಟ್ಟಡೆ ಸಮಯವಿರೋಧ, ಬಿಡದಿದ್ದರೆ ಜ್ಞಾನವಿರೋಧ.
ಗುಹೇಶ್ವರಲಿಂಗವು ಉಭಯ ದಳದ ಮೇಲೈದಾನೆ ಕಾಣಾ ಸಿದ್ಧರಾಮಯ್ಯಾ
                                                                        ............................ಅಲ್ಲಮ ಪ್ರಭು


ಇದು ಶರಣರ ತತ್ವದ ಪ್ರಮುಖ ಅಂಶ. ಇಷ್ಟ ಲಿಂಗದ ಅವಶ್ಯಕತೆಯ ಬಗ್ಗೆ ಸ್ಪಷ್ಟತೆ ನೀಡುತ್ತೆ.

ಭಾನುವಾರ, ಜುಲೈ 18, 2010

ಕುರುಹಳಿದು.. ಅರಿವರಿದು!

ದೇಹಭಾವವಳಿದಲ್ಲದೆ ಜೀವ ಭಾವವಳಿಯದು
ಜೀವ ಭಾವವಳಿದಲ್ಲದೆ ಭಕ್ತಿ ಭಾವವಳವಡದು
ಅರಿವು ತಲೆದೋರಿದಲ್ಲದೆ ಕುರುಹು ನಷ್ಟವಾಗದು
ಕುರುಹು ನಷ್ಟವಾಗಲ್ಲದೆ ಮಾಯೆ ಹಿಂಗದು
ಇದು ಕಾರಣ ಕಾಯದ ಜೀವದ ಹೊಲಿಗೆ ಅಳಿದ ಭೇಧವ ತಿಳಿಯಬಲ್ಲರೆ
ಗುಹೇಶ್ವರಲಿಂಗದ ಅರಿವು ಸಾಧ್ಯಬಹುದು ಸಿದ್ದರಾಮಯ್ಯ

..................ಅಲ್ಲಮ ಪ್ರಭು

http://www.raaga.com/player4/?id=72720&mode=100&rand=0.4384112348780036

.......................



ಭಾನುವಾರ, ಮೇ 30, 2010

ಹಂಸೆ ಹಾರಿತ್ತು!

ಕೆಂಡದ ಗಿರಿಯ ಮೇಲೊಂದು ಅರಗಿನ ಕಂಭವಿದ್ದಿತ್ತು ನೋಡಾ ಅಯ್ಯಾ
ಅರಗಿನ ಕಂಭದ ಮೇಲೊಂದು ಹಂಸೆ ಇದ್ದಿತ್ತು
ಕಂಭ ಬೆಂದಿತ್ತು ಹಂಸೆ ಹಾರಿತ್ತು ಗುಹೇಶ್ವರಾ


.................ಅಲ್ಲಮ ಪ್ರಭು


Get this widget | Track details | eSnips Social DNA

ಗುರುವಾರ, ನವೆಂಬರ್ 19, 2009

ತೊಟ್ಟಿಲು ಮುರಿದು ನೇಣು ಹರಿದು ಜೋಗುಳ ನಿಂತಲ್ಲದೆ!

ತುಂಬಾ ಹಿಂದೆ .. ಬಹುಶ ನಾಲ್ಕಾರು ತಿಂಗಳಾಗಿರಬಹುದು .. ಆಕಾಶವಾಣಿಯಲ್ಲಿ ಬೆಳಿಗ್ಗೆ ಪ್ರಸಾರವಾಗ್ತಾ ಇದ್ದ ಈ ಕಾರ್ಯಕ್ರಮವನ್ನು ರೆಕಾರ್ಡ್ ಮಾಡಿದ್ದೆ. ನಂತರ ಯಾವಾಗಲೋ ಅದನ್ನು ಕಂಪ್ಯೂಟರ್ ಗೆ ಕಾಪಿ ಮಾಡಿದ್ದೆ. ನನ್ನ ಮೊಬೈಲ್ ನಿಂದ ಇದು ಎಗರಿ ಹೋಗಿತ್ತು.

ಇಂದು ನನ್ನ ಕಂಪ್ಯೂಟರ್ ಅನ್ನು ತಡಕಾಡ್ತಾ ಇದ್ದಾಗ, ಆಕಸ್ಮಿಕವಾಗಿ ಈ ಕ್ಲಿಪ್ ಸಿಕ್ತು.


ಅಲ್ಲಮ ಪ್ರಭುಗಳ ವಚನಗಳು ನನಗೆ ತುಂಬಾ ಇಷ್ಟ. ಪರಮ ಅನುಭಾವದ ಮಾತುಗಳು ಅಲ್ಲಮನ ವಚನಗಳು.

ಈ clip ನ ವಚನಗಳು ಒಂದಕ್ಕಿಂತ ಒಂದು ಚೆಂದ. ಅದರಲ್ಲೂ  ಕೊನೆಯ (ಕೆಳಗಿನ) ವಚನ ತುಂಬಾ ಹಿಡಿಸಿತು.



     Get this widget
|
     Track details 
|
        eSnips Social DNA   


ಅಜ್ಞಾನವೆಂಬ ತೊಟ್ಟಿಲ ಒಳಗೆ ಜ್ಞಾನವೆಂಬ ಶಿಶುವ ಮಲಗಿಸಿ
ಸಕಲ ವೇದ ಶಾಸ್ತ್ರವೆಂಬ ನೇಣ ಕಟ್ಟಿ ಹಿಡಿದು ತೂಗಿ
ತಾ ಉಣಬಡುತ್ತಿದ್ದಾಳೆ ಭ್ರಾಂತಿಯೆಂಬ ತಾಯಿ
ತೊಟ್ಟಿಲು ಮುರಿದು ನೇಣು ಹರಿದು ಜೋಗುಳ ನಿಂತಲ್ಲದೆ
ಗುಹೆಶ್ವರಲಿಂಗನ ಕಾಣಬಾರದು.