ಶನಿವಾರ, ಜುಲೈ 08, 2023

ಭಗವದ್ಗೀತೆ : ರಾಜಸ ತ್ಯಾಗ

ಕನ್ನಡಕ್ಕೆ: 

ಅಳಲುಂಟೆಂದೋ ಮೈಕೈನೋಯಬಹುದೆಂಬಳುಕಿನಿಂದೋ ಎಸಗುವ ಗೆಯ್ಮೆಗಳನೆಸಗಿದರೆ|
ಎಸಗಿದ ತ್ಯಾಗವು ರಾಜಸವು, ದೊರೆಯದು ಕೂಡ ತ್ಯಾಗಫಲವು||


ಸೆಲೆ:
ದುಃಖಮಿತ್ಯೇವ ಯತ್ಕರ್ಮ ಕಾಯಕ್ಲೇಶಭಯಾತ್ ತ್ಯಜೇತ್ |
ಸ ಕೃತ್ವಾ ರಾಜಸಂ ತ್ಯಾಗಂ ನೈವ ತ್ಯಾಗಫಲಂ ಲಭೇತ್ ||

#ಭಗವದ್ಗೀತೆ 15.8

ಭಗವದ್ಗೀತೆಯ ಸಾಲು: ತಾಮಸತ್ಯಾಗ

ಕನ್ನಡಕ್ಕೆ: 
ನಿಯತಿಯಿಂದ ಬಂದಲ್ಲದೆ ಕರ್ಮಗಳನ್ನು ಬಿಡುವುದು ಯುಕ್ತವಲ್ಲ.
ಮೋಹದಿಂದ ಬಿಟ್ಟರೆ ತಾಮಸವೆಂದು ಕರೆಯಲ್ಪಡುವುದು.


ಸೆಲೆ:
ನಿಯತಸ್ಯ ತು ಸಂನ್ಯಾಸಃ ಕರ್ಮಣೋ ನೋಪಪದ್ಯತೇ
ಮೋಹಾತ್ತಸ್ಯ ಪರಿತ್ಯಾಗಸ್ತಾಮಸಃ ಪರಿಕೀರ್ತಿತಃ ৷18.7৷

ಭಗವದ್ಗೀತೆಯ ೧೮ನೇ ಅಧ್ಯಾಯದ ೭ ನೇ ಶ್ಲೋಕ‌ ಇದು. ಕಣ್ಣಿಗೆ ಕಾಣ್ತು, ಕನ್ನಡಕ್ಕೆ ತಂದೆ.

----

ಈ ಶ್ಲೋಕದಲ್ಲಿ ಕೃಷ್ಣ  "ಯಾವುದು ತಾಮಸತ್ಯಾಗ?"  ಎಂಬುದರ ಬಗ್ಗೆ ಮಾತಾಡ್ತಾ ಇದ್ದಾನೆ.

ಕರ್ಮಸನ್ಯಾಸ ಮತ್ತು ಕರ್ಮತ್ಯಾಗ ಎಂಬ ಪದಗಳ ಬಳಕೆ ಇದೆ.
#ಸನ್ಯಾಸ ಕ್ಕೂ #ತ್ಯಾಗ ಕ್ಕೂ ಬೇರೆತನವುಂಟು.

ಸನ್ಯಾಸವು "ಕರ್ಮತ್ಯಾಗ" ವಾದರೆ,‌ ತ್ಯಾಗವು "ಕರ್ಮಫಲತ್ಯಾಗ" !! 

"ಹೆಚ್ಚಿನದ್ದೇನೋ" ಸಿಕ್ಕುವುದೆಂದು ಮಾಡುವ ಕರ್ಮಗಳನ್ನು ಬಿಡುವುದು ಸನ್ಯಾಸ. ಕರ್ಮಗಳನ್ನು ಮಾಡಿಯೂ ಅದರ ಫಲವನ್ನು ಬಯಸದೇ ಇರುವುದು ತ್ಯಾಗ.

ತ್ಯಾಗವನ್ನೂ ಮತ್ತೆ ಮೂರು ತರ ಗುಂಪು‌ ಮಾಡುಬಹುದು. ಸಾತ್ವಿಕ, ರಾಜಸಿಕ ಮತ್ತು ತಾಮಸಿಕ.

ಸನ್ಯಾಸ ವನ್ನು ಸಾತ್ವಿಕತ್ಯಾಗ ದೆ ಕೆಳಗೆ ಗುಂಪುಮಾಡುತ್ತಾರೆ. 

ಅಜ್ಞಾನದಿಂದ, ತಪ್ಪುತಿಳುವಳಿಕೆಯಿಂದ, ಮೂಡನಂಬಿಕೆಯಿಂದ ಮಾಡುವ ತ್ಯಾಗವನ್ನು "ತಾಮಸಿಕ ತ್ಯಾಗ" ಎನ್ನಬಹುದು.

*ನಿಯತಿ* ಅಂದರೆ ವಿಧಿ, ದೈವ, ಹಣೆಬರಹ  fixed order of things, necessity, destiny; Fate ಮುಂತಾದ ಹುರುಳು ಹೇಳಬಹುದು. ನಿಯತಿ ಇಂದಲೇ ನೀತಿ ಎಂಬ ಪದ ಹುಟ್ಟಿದೆ. 


*ಪದಗಳ ಬಿಡಿಕೆ:*
ನಿಯತಿ + ಅಸ್ಯ + ತು + ಸನ್ಯಾಸಃ + ಕರ್ಮಣಃ + ನ + ಉಪಪದ್ಯತೇ
ಮೋಹಾತ್ +  ತಸ್ಯ + ಪರಿತ್ಯಾಗಃ + ತಾಮಸಃ + ಪರಿಕೀರ್ತಿತಃ 

#ಭಗವದ್ಗೀತೆ
#ಕನ್ನಡದಲ್ಲಿ_ಭಗವದ್ಗೀತೆ

ಮಂಗಳವಾರ, ಜೂನ್ 20, 2023

ನಸುಕಿನಲಿ‌ ನೆನೆಯುವ ನಲ್ಸಾಲುಗಳು

ಬೆಳಗೆದ್ದು ನೆನೆಯುವ‌ ಸಾಲುಗಳು.

ಬೆಳಗೆದ್ದು ನೆನೆವೆನು ಎದೆಯೊಳ್ಹೊ‌‌ಳೆಯುತಿಹ ಆನುತನವನ
ಇರುಹುರುಸೊಗವನ ಹಿರಿಹಂಸದೆಡೆ ನಡೆವನ ಮೂರರಾಚೆಯವನ |

ಯಾರು ಎಚ್ಚರನಿದಿರೆಯಾಳನಿದಿರೆಗಳೆಲ್ಲದರಲಿ ಇರುವನೋ ಅವನ ಎಂದೆಂದಿನವನ
ಸೊಕ್ಕಿಲ್ಲದನ ಪಳೆಕೂಟದನಲ್ಲದನ ಕುಂದಿಲ್ಲದ ಬೊಮ್ಮನ ||೧||

ಬೆಳಗೆದ್ದು ಕೊಂಡಾಡುವೆನು ಮಾತಿಗೆಟುಕದವನ  
ಯಾರಾಸರೆಯಿಂದ ಮಾತುಗಳು ಮಿನುಗುತಿಹವೋ ಅಂತ ತೆರಪಿಲ್ಲದವನ |

ಏನನು ಇದಲ್ಲ ಇದಲ್ಲವೆಂದ್ ಹೆಬ್ಬೊತ್ತಿಗೆಗಳು ಸಾರುತಿವೆಯೋ ಅಂತವನ 
ಹುಟ್ಟಿಲ್ಲದ ಕೊರೆಯಿಲ್ಲದ ಬಾಗಿಬೇಡಲುತಕ್ಕ ಅಯ್ಯರಿಗಯ್ಯನ ||೨||

ಬೆಳಗೆದ್ದು‌ ಕೈಮುಗಿವೆನು ಕತ್ತಲಮೀರಿದಗೆ ಪೊಳೆಬಣ್ಣಗೆ
ಇಡೀಯಗೆ ಹಳೆಯಗೆ ಮಾರ್ಪಡದನೆಲೆಯಗೆ ಪುರುಸರಲ್ ಪೆರಿಯನೆಂದು ಹೇಳಲ್ಪಡುವಗೆ।।

ಯಾರು ಇರ್‍ಮೆಯ ಎಲ್ಲಾ ಉಳಿದವುಳಿದಿಲ್ಲದವುಗಳಾಗಿ ಮೂಡಿಬಂದವನೋ ಅವಗೆ
ಹಗ್ಗ ಹಾವಾಗಿ ತೋರಿಬಂದವಗೆ ||  ೩ ||

---------
ಸೆಲೆ: ಪ್ರಾತಃಸ್ಮರಣ ಸ್ತೋತ್ರ, ಆದಿಶಂಕರ

ಪ್ರಾತಃ ಸ್ಮರಾಮಿ ಹೃದಿ ಸಂಸ್ಫುರದಾತ್ಮತತ್ತ್ವಂ
ಸತ್ಚಿತ್ಸುಖಂ ಪರಮಹಂಸಗತಿಂ ತುರೀಯಮ್ |

ಯತ್ಸ್ವಪ್ನಜಾಗರಸುಷುಪ್ತಮವೈತಿ ನಿತ್ಯಂ
ತದ್ಬ್ರಹ್ಮ ನಿಷ್ಕಲಮಹಂ ನ ಚ ಭೂತಸಂಘಃ ॥ 1 ॥

ಪ್ರಾತರ್‍ಭಜಾಮಿ ಮನಸೋ ವಚಸಾಮಗಮ್ಯಂ
ವಾಚೋ ವಿಭಾಂತಿ ನಿಖಿಲಾ ಯದನುಗ್ರಹೇಣ ।

ಯನ್ನೇತಿ ನೇತಿ ವಚನೈನಿರ್‍ಗಮಾ ಅವೋಚುಃ
ತಂ ದೇವದೇವಂ ಅಜಮಚ್ಯುತಮಾಹುರಗ್ರ್ಯಮ್ ॥ 2 ॥

ಪ್ರಾತರ್ನಮಾಮಿ ತಮಸಃ ಪರಮರ್ಕವರ್ಣಂ 
ಪೂರ್ಣಂ ಸನಾತನಪದಂ ಪುರುಷೋತ್ತಮಾಖ್ಯಮ್||

ಯಸ್ಮಿನ್ನಿದಂ ಜಗದಶೇಷಮಶೇಷಮೂರ್ತೌ 
ರಜ್ಜ್ವಾಂ ಭುಜಂಗಮ ಇವ ಪ್ರತಿಭಾಸಿತಂ ವೈ || 3 ||