ಶನಿವಾರ, ಜನವರಿ 09, 2010

ಘನ ಪಾಠ

ವೇದಗಳು ಬರವಣಿಗೆ ಪ್ರೌಡಾವಸ್ಥೆಗೆ ಬರುವ ಮುಂಚೆಯೇ  ಹುಟ್ಟಿದವು ಅನ್ನೋದು ಒಂದು ಜನಪ್ರಿಯ ವಾದ.


ವೇದಗಳು ಮೊದಲು ಮೊದಲು ಆರಂಭವಾಗಿದ್ದು ಯಜ್ಞಕಾಗಿಯೇ. ( ನಂತರದ ಕಾಲಘಟ್ಟದಲ್ಲಿ ವೇದಗಳನ್ನು "ವಿಶೇಷ" ವಾಗಿ ಅರ್ಥ ಮಾಡಿಕೊಳ್ಳಲಾಯಿತು! ). ಈ ಯಜ್ಞಗಳು ಅಂದಿನ ಅನೇಕರಿಗೆ ಹೊಟ್ಟೆ ಪಾಡಿನ ಕಾಯಕವಾದದ್ದರಿಂದ , ವೇದಗಳನ್ನು ಅಂದರೆ ತನ್ನ ಕುಲಕಸುಬಿನ ಮೂಲ ಸಾಮಗ್ರಿಯನ್ನು ಉಳಿಸಿಕೊಳ್ಳುವುಸು ಅಂದಿನ ಜನರಿಗೆ ತುಂಬಾ ಅವಶ್ಯವಾಗಿತ್ತು. 


ಆದರೆ ಬರವಣಿಗೆ ರೂಡಿ ಇಲ್ಲದ ಸಮಯದಲ್ಲಿ ಈ ವೇದಗಳನ್ನೂ ಹೇಗೆ ಉಳಿಸಿಕೊಳ್ಳುವುದು? ಪೀಳಿಗೆಯಿಂದ ಪೀಳಿಗೆಗೆ 'ಮಾತಿನ ಮೂಲಕ' ದಾಟಿಸಿಯೇ ಉಳಿಸಿಕೊಳ್ಳಬೇಕಾದಂತ ಪರಿಸ್ಥಿತಿ ಅಂದಿನ ಜನರಿಗಿತ್ತು. 


ಹಾಗಾಗಿ ಪೀಳಿಗೆಯಿಂದ ನಂತರದ ಪೀಳಿಗೆ, ಗುರುವಿಂದ ಶಿಷ್ಯ ಕೇವಲ ಕೇಳಿಯೇ ಕಲಿತಿದ್ದರಿಂದ ಕಾಲಾಂತರದಲ್ಲಿ ಈ ವೇದಗಳನ್ನು ಶ್ರುತಿ ಅಂತ ಕರೆಯೋ ಅಭ್ಯಾಸವೂ ಶುರು ಆಯ್ತು. 


ಬರು ಬರುತ್ತಾ ವೇದಗಳ ಮೂಲ ಉಚ್ಚಾರ ಬದಲಾಗುತ್ತಿದ್ದಂತೆ , ವೇದಗಳನ್ನು / ವೇದಗಳ ಶಬ್ದಗಳ ಸ್ಪಷ್ಟತೆ ಮತ್ತು ಶೈಲಿಯನ್ನು ಮೂಲ ರೂಪವಾಗಿಯೇ ಉಳಿಸಿಕೊಳ್ಳುವ ಅವಶ್ಯಕತೆ ಅಂದಿನ ಜನರಿಗೆ ಬಿತ್ತು. 


ಈ ಕಾರಣವಾಗಿಯೇ ವೇದಗಳನ್ನು ಕಲಿಯಲು / ಅರ್ಥ ಮಾಡಿಕೊಳ್ಳಲು ಊರು ಗೋಲುಗಳಾದ ವೇದಾಂಗ ಗಳು ಹುಟ್ಟಿದವು. 


ಯಾವುದೇ ಸ್ವರಗಳೂ ಬದಲಾಗದಂತೆ ಯಾವುದೇ ಶಬ್ದ / ಅಕ್ಷರಗಳನ್ನೂ ಕಳೆದುಕೊಳ್ಳದಂತೆ ವೇದಗಳನ್ನು ಕಾಪಾಡಿಕೊಂಡು ಬರಲು ಕೆಲ ನೀತಿ ನಿಯಮಗಳನ್ನು ಅವರು ಮಾಡಿದರು.  


ಪ್ರತಿ ಪದದ ಒಂದೊಂದು ಅಕ್ಷರವನ್ನು ಉಚ್ಚರಿಸಲು 'ಇಂತಿಷ್ಟು ಸಮಯ' ಬೇಕು ಅನ್ನೋ ಮಾನದಂಡವನ್ನು ಅವರು ನಿಗದಿಪಡಿಸಿದರು.ಮತ್ತು ಈ ಸಮಯದ basic unit ಅನ್ನು ಅವರು 'ಮಾತ್ರೆ' ಅಂತ ಕರೆದರು. ಒಂದು ಪದ / ಅಕ್ಷರ ತನ್ನ ಮೂಲ ರೀತಿಯಲ್ಲೇ ಹುಟ್ಟಲು ಅದು ದೇಹದ ಯಾವ ಭಾಗದಿಂದ ಹುಟ್ಟುತ್ತೆ / ಹುಟ್ಟಬೇಕು ಮತ್ತು ಆಗ ಉಸಿರಿನ ಪ್ರಮಾಣ ಎಷ್ಟಿರಬೇಕು ಅನ್ನೋದನ್ನು ಗಮನಿಸಿದರು.  


ಮಂತ್ರಗಳು ತಮ್ಮ ಮೂಲ ಉಚ್ಚಾರಣೆ ಶೈಲಿಯನ್ನು ಕಳೆದುಕೊಳ್ಳದಂತೆ ಉಳಿಸಿಕೊಳ್ಳಲು ಮಾಡಿದ ಅನೇಕ ಪ್ರಯತ್ನಗಳಲ್ಲಿ "ಪಾಠ" ಗಳೂ ಒಂದು. 


ವಾಕ್ಯ, ಪದ, ಕ್ರಮ, ಜಟ , ಮಾಲ, ಶಿಖಾ, ರೇಖಾ, ಧ್ವಜ, ದಂಡ, ರಥ,ಘನ , ಇತ್ಯಾದಿ 



ಪದ ಪಾಠ ಮತ್ತು ವಾಕ್ಯ ಪಾಠಗಳು "ಪ್ರಕೃತಿ" ಪಾಠಗಳು ಅಂತಾರೆ. ಅಂದ್ರೆ ಸಹಜವಾಗಿ ಪದಗಳನ್ನು ಹಿಂದೆ ಮುಂದೆ ಮಾಡದೆ ನೇರವಾಗಿ ಹೇಳುವುದು.  


ಉಳಿದವು, ಸರಳೀಕರಿಸಿ ಹೇಳಬೇಕು ಅಂದ್ರೆ 'ವಿಕೃತಿ' ಪಾಠಗಳು. ಅಂದ್ರೆ ಪದಗಳನ್ನು ಮತ್ತೆ ಮತ್ತೆ ಹಿಂದೆ ಮುಂದೆ ಮಾಡಿ ಹೇಳುತ್ತಾರೆ. 


ಮೇಲಿನವುಗಳಲ್ಲಿ  ನನ್ನ ಗಮನ ಸೆಳೆದ ಪಾಠಗಳು ಅಂದ್ರೆ 'ಜಟಾ ಪಾಠ' ಮತ್ತು "ಗಣ ಪಾಠ". 


ವೇದಗಳನ್ನು  "ಜಟಾ ಪಾಠ " ಶೈಲಿಯಲ್ಲಿ ಪಠನೆ ಮಾಡಬಲ್ಲಂತ ಕೌಶಲ್ಯವನ್ನು ಗಳಿಸಿಕೊಂಡಾತನಿಗೆ "ಜಟಾ ವಲ್ಲಭ" ಅನ್ನೋ ಬಿರುದು ಇರ್ತ ಇತ್ತು. ( ನನ್ನ collegue ಸರ್ ನೇಮ್ "ಜಟಾ ವಲ್ಲಭುಲು" ಮತ್ತ ಈ ವ್ಯಕ್ತಿಯ ಸರ್ನೇಮ್ ಎ ನನಗೆ ಈ ಪಾಠಗಳ ಬಗ್ಗೆ ತಿಳಿದುಕೊಳ್ಳಲು ಟ್ರಿಗ್ಗೆರ್ ಪಾಯಿಂಟ್! ). 


'ಜಟಾಪಾಠ' ಕ್ಕಿಂತ ಇನ್ನೂ ಹೆಚ್ಚಿನ ಎತ್ತರದ / ಕಷ್ಟದ ಶೈಲಿ ಅಂದ್ರೆ 'ಗಣ ಪಾಠ'. ಈ ಶೈಲಿಯನ್ನು ಕರಗತ ಮಾಡಿ ಕೊಂಡವನಿಗೆ "ಗಣಪಾಠಿ" ಅನ್ನೋ ಬಿರುದು ಇರ್ತ ಇತ್ತು. ಇದನ್ನು ಅತ್ಯುನ್ನತ ಮಟ್ಟದ ವೇದ ಪಠಣ ಶೈಲಿ ಅಂತ ಅನೇಕರು ಹೇಳುತ್ತಾರೆ. 


ಉದಾಹರಣೆಗೆ ಈ ಕೆಲ ನಮಕದ ಸಾಲುಗಳು. 


ನಮಃ ತಾರಾಯ  
ನಮಃ ಶಂಭವೇ ಚ ಮಯೋ ಭವೇ ಚ 
ನಮಃ ಶಂಕರಾಯ ಚ ಮಯಸ್ಕರಾಯ ಚ 
ನಮಃ ಶಿವಾಯ ಚ ಶಿವತರಾಯ ಚ


ಘನಪಾಠ ದಲ್ಲಿ ಹಾಡಿದಾಗ ಕೆಳಗಿನಂತೆ ಸುಂದರವಾಗಿ ಮೂಡಿ ಬರುತ್ತೆ. 


Get this widget | Track details | eSnips Social DNA
ಘನ ಪಾಠ ದಲ್ಲಿ ಗಾಯತ್ರಿಯೂ ಇಷ್ಟವಾಯಿತು. (ಕೆಳಗೆ ಕೇಳಬಹುದು)

Get this widget | Track details | eSnips Social DNA