ಅಲ್ಲಮ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಅಲ್ಲಮ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಜುಲೈ 18, 2010

ಕುರುಹಳಿದು.. ಅರಿವರಿದು!

ದೇಹಭಾವವಳಿದಲ್ಲದೆ ಜೀವ ಭಾವವಳಿಯದು
ಜೀವ ಭಾವವಳಿದಲ್ಲದೆ ಭಕ್ತಿ ಭಾವವಳವಡದು
ಅರಿವು ತಲೆದೋರಿದಲ್ಲದೆ ಕುರುಹು ನಷ್ಟವಾಗದು
ಕುರುಹು ನಷ್ಟವಾಗಲ್ಲದೆ ಮಾಯೆ ಹಿಂಗದು
ಇದು ಕಾರಣ ಕಾಯದ ಜೀವದ ಹೊಲಿಗೆ ಅಳಿದ ಭೇಧವ ತಿಳಿಯಬಲ್ಲರೆ
ಗುಹೇಶ್ವರಲಿಂಗದ ಅರಿವು ಸಾಧ್ಯಬಹುದು ಸಿದ್ದರಾಮಯ್ಯ

..................ಅಲ್ಲಮ ಪ್ರಭು

http://www.raaga.com/player4/?id=72720&mode=100&rand=0.4384112348780036

.......................



ಗುರುವಾರ, ನವೆಂಬರ್ 19, 2009

ತೊಟ್ಟಿಲು ಮುರಿದು ನೇಣು ಹರಿದು ಜೋಗುಳ ನಿಂತಲ್ಲದೆ!

ತುಂಬಾ ಹಿಂದೆ .. ಬಹುಶ ನಾಲ್ಕಾರು ತಿಂಗಳಾಗಿರಬಹುದು .. ಆಕಾಶವಾಣಿಯಲ್ಲಿ ಬೆಳಿಗ್ಗೆ ಪ್ರಸಾರವಾಗ್ತಾ ಇದ್ದ ಈ ಕಾರ್ಯಕ್ರಮವನ್ನು ರೆಕಾರ್ಡ್ ಮಾಡಿದ್ದೆ. ನಂತರ ಯಾವಾಗಲೋ ಅದನ್ನು ಕಂಪ್ಯೂಟರ್ ಗೆ ಕಾಪಿ ಮಾಡಿದ್ದೆ. ನನ್ನ ಮೊಬೈಲ್ ನಿಂದ ಇದು ಎಗರಿ ಹೋಗಿತ್ತು.

ಇಂದು ನನ್ನ ಕಂಪ್ಯೂಟರ್ ಅನ್ನು ತಡಕಾಡ್ತಾ ಇದ್ದಾಗ, ಆಕಸ್ಮಿಕವಾಗಿ ಈ ಕ್ಲಿಪ್ ಸಿಕ್ತು.


ಅಲ್ಲಮ ಪ್ರಭುಗಳ ವಚನಗಳು ನನಗೆ ತುಂಬಾ ಇಷ್ಟ. ಪರಮ ಅನುಭಾವದ ಮಾತುಗಳು ಅಲ್ಲಮನ ವಚನಗಳು.

ಈ clip ನ ವಚನಗಳು ಒಂದಕ್ಕಿಂತ ಒಂದು ಚೆಂದ. ಅದರಲ್ಲೂ  ಕೊನೆಯ (ಕೆಳಗಿನ) ವಚನ ತುಂಬಾ ಹಿಡಿಸಿತು.



     Get this widget
|
     Track details 
|
        eSnips Social DNA   


ಅಜ್ಞಾನವೆಂಬ ತೊಟ್ಟಿಲ ಒಳಗೆ ಜ್ಞಾನವೆಂಬ ಶಿಶುವ ಮಲಗಿಸಿ
ಸಕಲ ವೇದ ಶಾಸ್ತ್ರವೆಂಬ ನೇಣ ಕಟ್ಟಿ ಹಿಡಿದು ತೂಗಿ
ತಾ ಉಣಬಡುತ್ತಿದ್ದಾಳೆ ಭ್ರಾಂತಿಯೆಂಬ ತಾಯಿ
ತೊಟ್ಟಿಲು ಮುರಿದು ನೇಣು ಹರಿದು ಜೋಗುಳ ನಿಂತಲ್ಲದೆ
ಗುಹೆಶ್ವರಲಿಂಗನ ಕಾಣಬಾರದು.