ಬುಧವಾರ, ಸೆಪ್ಟೆಂಬರ್ 25, 2024

ಜೀಯ-ಜೀವ ನ್ಯಾಯಗಳು

ಅಂಕ ಓಡಿದರೆ ತೆತ್ತಿಗಂಗೆ ಭಂಗವಯ್ಯಾ, 
ಕಾದಿ ಗೆಲಿಸಯ್ಯಾ ಎನ್ನನು
ಕಾದಿ ಗೆಲಿಸಯ್ಯಾ ಕೂಡಲಸಂಗಮದೇವಯ್ಯಾ, 
ಎನ್ನ ತನು-ಮನ -ಧನದಲ್ಲಿ ವಂಚನೆಯಿಲ್ಲದೆ - #ಬಸವಣ್ಣ 
--

ಜೀಯ/ಜೀವ ರ ನಡುವೆ ಮೂರು ನ್ಯಾಯಗಳನ್ನು  ಗುರುತಿಸಿರುವರು. ಮಾರ್ಜಾಲ ಕಿಶೋರ ನ್ಯಾಯ, ಮರ್ಕಟ ಕಿಶೋರ ನ್ಯಾಯ ಮತ್ತು ಮತ್ಸ್ಯ ಕಿಶೋರ ನ್ಯಾಯ. 

೧. ಮಾರ್ಜಾಲ ಕಿಶೋರ ನ್ಯಾಯ:  ಬೆಕ್ಕು ತನ್ನ ಮರಿಯನ್ನು ತಾನೇ ಕಚ್ಚಿ ಹಿಡಿದು ಒಂದ ನೆಲೆಯಿಂದ ಇನ್ನೊಂದು ನೆಲೆಗೆ ಸಾಗಿಸಿ ಕಾಪಾಡುವುದು. ಮರಿಯ ಪ್ರಯತ್ನ ‌ಏನೂ‌ ಇಲ್ಲ.

೨. ಮರ್ಕಟ ಕಿಶೋರ ನ್ಯಾಯ: ತಾಯಿ‌ಮಂಗವು ತನ್ನ ಮರಿಯನ್ನು ತಾನೇ ಹಿಡಿದುಕೊಳ್ಳುವುದಿಲ್ಲ. ಮರಿಯೇ ತನ್ನ ತಾಯಿಯನ್ನು ಗಟ್ಟಿಯಾಗಿ ಅವುಚಿಕೊಳ್ಳುವುದು. ತಾಯಿ ಪಾತ್ರ ರಕ್ಷಣೆಯಲ್ಲಿ ಇಲ್ಲ. ಎಲ್ಲ ಪ್ರಯತ್ನ ವೂ ಮರಿಯದ್ದೇ.

೩. ಮತ್ಸ್ಯ ಕಿಶೋರ ನ್ಯಾಯ : ಮರಿ‌ಮೀನು‌ ನೆನೆದರೆ ತಾಯಿ‌ಮೀನು ಆಸರೆಗೆ ಓಡಿಬರುವುದು. ಇಬ್ಬರ ಪ್ರಯತ್ನವೂ ಇದೆ..

ಈ ವಚನದಲ್ಲಿ ಬಸವಣ್ಣ ತನ್ನ ಇಡೀ ಭಾರವನ್ನು ಕೂಡಲಸಂಗಯ್ಯನ ಮೇಲೆ ಹಾಕಿದ್ದಾರೆ. #ಮತ್ಸ್ಯ_ಕಿಶೋರ_ನ್ಯಾಯ ಇಲ್ಲಿದೆ ಎನ್ನಬಹುದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ