ಬುಧವಾರ, ಸೆಪ್ಟೆಂಬರ್ 25, 2024

ವಚನಗಳಲ್ಲಿ ಸಿದ್ದಾಂತಶಿಖಾಮಣಿ

ಹಗಹದಲ್ಲಿ ಬಿದ್ದವರ ಮೇಲೆ ಒರಳ ನೂಂಕುವರೆ?
ಕೋಳದ ಮೇಲೆ ಸಂಕಲೆಯನಿಕ್ಕುವರೆ?
ಬೆಂದ ಹುಣ್ಣ ಕಂಬಿಯಲ್ಲಿ ಕೀಸುವರೆ?
ಕೂಡಲಸಂಗಯ್ಯನ ಕಾಡುವ ಕಾಟ
ಸಿರಿಯಾಳಂಗಲ್ಲದೆ ಸೈರಿಸಬಹುದೇ?        
                  - ಬಸವಣ್ಣ - Basavanna 

ಸಿರಿಯಾಳ 63 ಜನ #ಪುರಾತನ ರಲ್ಲಿ ಒಬ್ಬ. ಈ ಪುರಾತನ ರು ದೊಡ್ಡ ಶಿವಭಕ್ತರು. ಆದರೆ ಇಷ್ಟಲಿಂಗಧಾರಿಗಳಲ್ಲ. ಶರಣರಿಗೆ ಇವರ ಬಗ್ಗೆ ತುಂಬಾ ಪ್ರೀತಿ - ಮತ್ತೆ ಮತ್ತೆ ನೆನೆವರು.

ಶರಣರು ಅಲ್ಲಲ್ಲಿ ಶಿವ #ಗಣ ಗಳನ್ನೂ ನೆನೆವರು‌. ಇವರೂ ಕೂಡೂ ಲಿಂಗಧಾರಿಗಳಲ್ಲ.

ಕೇವಲ ಶಿವಭಕ್ತಿ ಇದ್ದ ಕಾರಣಕ್ಕಾಗಿಯೇ ಲಿಂಗಧಾರಿಗಳಲ್ಲದವರನ್ನೂ ನೆನೆವ ಶರಣರು ಅದೇಕೆ ಲಿಂಗಧಾರಿಗಳಾದವರನ್ನೇ - ಮತ್ತು ಜಗತ್ತಿಗೆ ಈ‌ ಇಷ್ಟಲಿಂಗದ ಕಲ್ಪನೆ ಕೊಟ್ಟವರನ್ನೇ ನೆನೆಯಲಿಲ್ಲ?!
ಉತ್ತರ ಸ್ಪಷ್ಟ: ೧೨ ನೇ ಶತಮಾನಕ್ಕಿನ್ನೂ ಈ ನಾಲಕ್ಕು ಅತ್ವಾ ಐದು ಜನರು ಇರಲಿಲ್ಲ. 

ಜೈನ ಬೌದ್ದ ವೇದ ಉಪನಿಷತ್ತು ಆಗಮ (ಇವು ಯಾವೂ ಶರಣರ ಸಂಪ್ರದಾಯ ಅಲ್ಲದಿದ್ದರೂ) ಗಳನ್ನು ಉಲ್ಲೇಖಿಸುವ ಶರಣರು ತನ್ನದೇ ಸಂಪ್ರದಾಯವಾದ ಸಿದ್ದಾಂತಶಿಖಾಮಣಿ ಯ ಒಂದು ಸಾಲನ್ನೂ ಯಾಕೆ ಉಲ್ಲೇಖಿಸಿಲ್ಲ..  
ಕಾರಣ ಸ್ಪಷ್ಟ.. ಆಗಿನ್ನೂ ಈ‌ ಪುಸ್ತಕ ಸಂಕಲನ ಗೊಂಡಿರಲಿಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ