೧. ಗಾಯತ್ರಿ ಮಂತ್ರ :
ತತ್ಸವಿತುರ್ವರೇಣ್ಯಂ
ಭರ್ಗೋ ದೇವಸ್ಯ ಧೀಮಹಿ!
ಧಿಯೋ ಯೋ ನಃ ಪ್ರಚೋದಯಾತ್ ॥
ಇದೇ ಮೂಲದ ಸವಿತೃಮಂತ್ರ. ವಿಶ್ವಾಮಿತ್ರನ ಕೊಡುಗೆ. ಮೊದಲು ಋಗ್ವೇದದಲ್ಲಿ ಬರುವದು. ಉಳಿದ ವೇದಗಳಲ್ಲೂ ಬರುವುದು. ಪುರಾಣಗಳಲ್ಲೂ ಮತ್ತೆ ಮತ್ತೆ ಬರುವುದು.
ಗಾಯತ್ರಿ ಎನ್ನುವುದು ವೇದಗಳಲ್ಲಿ ಬರುವ ಒಂದು ಛಂದಸ್ಸು ಆಗಿದ್ದರೂ ಈ ಮಂತ್ರವೇ ಗಾಯತ್ರಿ ಮಂತ್ರ ಎಂದು ಹೆಸರಿವಾಸಿ.
ಓಂ ಎಂಬ ಪ್ರಣವ ವನ್ನೂ ಮತ್ತು ಭೂರ್ ಭುವಃ ಸ್ವಃ ಎಂಬ ಮೂರು ವ್ಯಾಹೃತಿ ಗಳನ್ನೂ ಮೊದಲಿಗೆ ಸೇರಿಸಿಕೊಂಡು ಈ ಮಂತ್ರವನ್ನು ಹೇಳುವ ಪರಿಪಾಠ ಬೆಳೆದುಬಂದಿದೆ.
ಪೂರ್ಣ ಪಾಠ ಈ ಕೆಳಗಿನಂತಿದೆ
ಓಂ ಭೂರ್ಭುವಃಸ್ವಃ
ತತ್ಸವಿತುರ್ವರೇಣ್ಯಂ
ಭರ್ಗೋ ದೇವಸ್ಯ ಧೀಮಹಿ!
ಧಿಯೋ ಯೋ ನಃ ಪ್ರಚೋದಯಾತ್ ॥
----
೨. ಗಾಯತ್ರಿ ಛಂದಸ್ಸು.
ಇದು ಮೂರು ಮೂರು ಸಾಲುಗಳನ್ನು ಹೊಂದಿರುವ ಛಂದಸ್ಸು. ಒಂದೊಂದು ಸಾಲಿನಲ್ಲೂ ಎಂಟು ಅಕ್ಷರಗಳು ಇರುತ್ತವೆ. ಒಟ್ಟು ೨೪ ಅಕ್ಷರಗಳು ಉಳ್ಳದ್ದು. ಕೆಳಗಿನ ಸವಿತೃಮಂತ್ರವು ಗಾಯತ್ರಿ ಛಂದಸ್ಸಿನಲ್ಲಿ ಬರೆಯಲ್ಪಟ್ಟಿದೆ.
ಸಾಲು ೧:: (೮ ಅಕ್ಷರಗಳು)
ತತ್ + ಸ + ವಿ + ತುರ್ + ವ + ರೇ + ಣಿ + ಯಂ
ಸಾಲು ೨:: (೮ ಅಕ್ಷರಗಳು)
ಭರ್ + ಗೋ + ದೇ + ವ + ಸ್ಯ + ಧೀ + ಮ + ಹಿ
ಸಾಲು ೩:: (೮ ಅಕ್ಷರಗಳು)
ಧಿ + ಯೋ + ಯೋ + ನಃ + ಪ್ರ + ಚೋ + ದ + ಯಾತ್
----
೩. ಗಾಯತ್ರಿ ದೇವತೆ::
ಒಂದು ದೇವತೆಯಾಗಿ ಗಾಯತ್ರಿ ಯ ಕಲ್ಪನೆ ತುಂಬಾ ಇತ್ತೀಚಿನದ್ದು. ೧೬ - ೧೭ ನೇ ಶತಮಾನಕ್ಕೂ ಇತ್ತೀಚಿನದ್ದು ಮತ್ತು ಈ ಕಲ್ಪನೆ ಆಂಧ್ರಪ್ರದೇಶದಲ್ಲಿ ಹುಟ್ಟಿತು ಎನ್ನುವರು.
----
೪. ಮಂತ್ರ - ಗಾಯತ್ರಿ ಪದಗಳ ಬೇರರಿಮೆ.
"ಮನನಾತ್ ತ್ರಾಯತೇ ಇತಿ ಮಂತ್ರಃ" ಎಂದು ಮಂತ್ರಕ್ಕೆ ನಿರುಕ್ತ (ಬೇರರಿಮೆ / Etymology) ಹೇಳಲಾಗಿದೆ. "ಮನನಾತ್ತ್ರಾಯತೇ ಯಸ್ಮಾತ್ತಸ್ಮಾನ್ಮಂತ್ರೋ಼sಯಮೀರಿತಃ" ಎಂಬ ಸ್ಕಾಂದಪುರಾಣದ ಸಾಲೂ ಇದೆ. ಮನನ ಎಂದರೆ ಮೇಲಿಂದ ಮೇಲೆ ಯುಕ್ತಿಯಿಂದ ಧ್ಯಾನಿಸುವುದು. ಮನನದಿಂದ ನಮ್ಮನ್ನು ರಕ್ಷಿಸುವುದರಿಂದ / ಕಾಪಾಡುವುದರಿಂದ ಇದು ಮಂತ್ರವೆನಿಸಿಕೊಳ್ಳುವುದು.
ಗಾಯತ್ರಿ / ಗಾಯತ್ರ ಕ್ಕೂ ಇದೇ ತರದ ಬೇರರಿಮೆಯನ್ನೇ ಹೇಳಲಾಗಿದೆ. ಗಾಯತ್ರಕ್ಕೆ "ಗಾಯಂತಾಂ ತ್ರಾಯತೇ ಯಸ್ಮಾತ್ ಇತಿ ಗಾಯತ್ರಾ" ಎನ್ನುವ ನಿರುಕ್ತ / ಬೇರರಿಮೆ ಹೇಳಲಾಗಿದೆ. ಯಾವುದನ್ನು ಉಲಿಯುವುದರಿಂದ ನಾವು ಕಾಪಾಡಲ್ಪಡುತ್ತೇವೋ ಅದು ಗಾಯತ್ರಿ.
೫. ರುದ್ರ / ಶಿವ / ಮಹೇಶ ಗಾಯತ್ರಿ ಗಳು
ಈ ಗಾಯತ್ರಿಮಂತ್ರ (ಮೂರು ಸಾಲಿನ ಪದ್ಯ) ಅದೆಷ್ಟು ಹೆಸರುವಾಸಿ ಎಂದರೆ ಇದೇ ದಾಟಿಯಲ್ಲಿ ಹಲವಾರು ಮಂತ್ರಗಳ ಹುಟ್ಟಿಗೆ ಕಾರಣವಾಯ್ತು. ಕೆಲವು ರುದ್ರ / ಶಿವನ ಮತ್ತವನ ಪರಿವಾರದದವರ ಮೇಲಿನ ಗಾಯತ್ರಿಮಂತ್ರಗಳನ್ನು ಇಲ್ಲಿ ಪಟ್ಟಿಮಾಡುತ್ತಿರುವೆ. ಇವನ್ನು ಲಿಂಗಪುರಾಣ ದಿಂದ ತೆಗೆದುಕೊಂಡಿದ್ದೇನೆ.
೧. ಮಹೇಶ_ಗಾಯತ್ರಿ
ತನ್ಮಹೇಶಾಯ ವಿದ್ಮಹೇ
ವಾಗ್ವಿಶುದ್ಧಾಯ ಧೀಮಹಿ |
ತನ್ನಃ ಶಿವಃ ಪ್ರಚೋದಯಾತ್ ||
೨. ರುದ್ರ_ಗಾಯತ್ರಿ
ತತ್ಪುರುಷಾಯ ವಿದ್ಮಹೇ
ಮಹಾದೇವಾಯ ಧೀಮಹಿ |
ತನ್ನೋ ರುದ್ರಃ ಪ್ರಚೋದಯಾತ್ ||
೩.
ತತ್ಪುರುಷಾಯ ವಿದ್ಮಹೇ
ವಾಗ್ವಿಶುದ್ಧಾಯ ಧೀಮಹಿ ।
ತನ್ನಃ ಶಿವಃ ಪ್ರಚೋದಯಾತ್ ||
೪.
ಸರ್ವೇಶ್ವರಾಯ ವಿದ್ಮಹೇ
ಶೂಲಹಸ್ತಾಯ ಧೀಮಹಿ |
ತನ್ನೋ ರುದ್ರಃ ಪ್ರಚೋದಯಾತ್ ||
ಉಳಿದ ಮೂಲದಿಂದ:
೫. ಓಂ
ಮಹಾದೇವಾಯ ವಿದ್ಮಹೇ,
ರುದ್ರಮೂರ್ತಯೇ ಧೀಮಹಿ
ತನ್ನೋ ಶಿವಃ ಪ್ರಚೋದಯಾತ್ ||
೬. ಓಂ
ಸದಾಶಿವಾಯ ವಿದ್ಮಹೇ,
ಸಹಸ್ರಾಕ್ಷಾಯ ಧೀಮಹಿ |
ತನ್ನಃ ಸಾಂಬಃ ಪ್ರಚೋದಯಾತ್ ||
ಈ ಕೆಳಗಿನವು ನೋಡಲು ಗಾಯತ್ರಿ ಛಂದಸ್ಸಿನಲ್ಲಿ ಇರುವಂತೆ ಕಂಡರೂ ಕೆಲಸ ಸಾಲುಗಳಲ್ಲಿ ಎಂಟರ ಬದಲು ಒಂಬತ್ತು ಅಕ್ಷರಗಳಿವೆ.
೭. ಓಂ
ಮಲ್ಲಿಕಾರ್ಜುನಾಯ ವಿದ್ಮಹೇ, (೯)
ಶ್ರೀ ಶೈಲನಾಥಾಯ ಧೀಮಹಿ | (೯)
ತನ್ನೋ ರುದ್ರಃ ಪ್ರಚೋದಯಾತ್ ||
----
೬. ಶಿವನ ಪರಿವಾರ ದೇವತೆಗಳ ಮೇಲಿನ ಗಾಯತ್ರಿ ಗಳು
ಗಣಾಂಬಿಕಾಯೈ ವಿದ್ಮಹೇ ಕರ್ಮಸಿದ್ಧ್ಯೈ ಚ ಧೀಮಹಿ ।
ತನ್ನೋ ಗೌರೀ ಪ್ರಚೋದಯಾತ್ ||
ಕಾತ್ಯಾಯನ್ಯೈ ವಿದ್ಮಹೇ ಕನ್ಯಾಕುಮಾರ್ಯೈ ಧೀಮಹಿ ।
ತನ್ನೋ ದುರ್ಗಾ ಪ್ರಚೋದಯಾತ್ ||
ವೀರಭದ್ರಾಯ ವಿದ್ಮಹೇ ಮಹಾನಾದಾಯ ಧೀಮಹೇ |
ತನ್ನಃ ಶಾಂತಃ ಪ್ರಚೋದಯಾತ್ ||
ತತ್ಪುರುಷಾಯ ವಿದ್ಮಹೇ ವಕೃತುಂಡಾಯ ಧೀಮಹಿ ।
ತನ್ನೋ ದಂತಿಃ ಪ್ರಚೋದಯಾತ್ ||
ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ I
ತನ್ನೊ ದಂತೀ ಪ್ರಚೋದಯಾತ್ ॥
ಮಹಾಸೇನಾಯ ವಿದ್ಮಹೇ ವಾಗ್ವಿಶುದ್ಧಾಯ ಧೀಮಹಿ ।
ತನ್ನಃ ಸ್ಕಂದಃ ಪ್ರಚೋದಯಾತ್ ||
ಹರಿವಕ್ತ್ರಾಯ ವಿದ್ಮಹೇ ರುದ್ರ ವಕ್ತ್ರಾಯ ಧೀಮಹಿ ।
ತನ್ನೋ ನಂದೀ ಪ್ರಚೋದಯಾತ್
ತೀಕ್ಷ್ಣ ಶೃಂಗಾಯ ವಿದ್ಮಹೇ ವೇದಪಾದಾಯ ಧೀಮಹಿ।
ತನ್ನೋ ವೃಷಃ ಪ್ರಚೋದಯಾತ್ ||
ಶಿವಾಸ್ಯಜಾಯೆ ವಿದ್ಮಹೇ ದೇವರೂಪಾಯೈ ಧೀಮಹಿ |
ತನ್ನೋ ವಾಚಾ ಪ್ರಚೋದಯಾತ್ ||