ಬುಧವಾರ, ಜನವರಿ 15, 2025

ರುದ್ರ / ಮಹೇಶ ಗಾಯತ್ರಿ

೧. ಗಾಯತ್ರಿ ಮಂತ್ರ :

ತತ್‌ಸವಿತುರ್‍ವರೇಣ್ಯಂ 
ಭರ್ಗೋ ದೇವಸ್ಯ ಧೀಮಹಿ
ಧಿಯೋ ಯೋ ನಃ ಪ್ರಚೋದಯಾತ್‌

ಇದೇ ಮೂಲದ ಸವಿತೃಮಂತ್ರ. ವಿಶ್ವಾಮಿತ್ರನ ಕೊಡುಗೆ. ಮೊದಲು ಋಗ್ವೇದದಲ್ಲಿ ಬರುವದು. ಉಳಿದ ವೇದಗಳಲ್ಲೂ ಬರುವುದು. ಪುರಾಣಗಳಲ್ಲೂ ಮತ್ತೆ ಮತ್ತೆ ಬರುವುದು.

ಗಾಯತ್ರಿ ಎನ್ನುವುದು ವೇದಗಳಲ್ಲಿ ಬರುವ ಒಂದು ಛಂದಸ್ಸು ಆಗಿದ್ದರೂ ಈ ಮಂತ್ರವೇ ಗಾಯತ್ರಿ ಮಂತ್ರ ಎಂದು ಹೆಸರಿವಾಸಿ.

ಓಂ ಎಂಬ ಪ್ರಣವ ವನ್ನೂ ಮತ್ತು ಭೂರ್ ಭುವಃ ಸ್ವಃ ಎಂಬ ಮೂರು ವ್ಯಾಹೃತಿ ಗಳನ್ನೂ ಮೊದಲಿಗೆ ಸೇರಿಸಿಕೊಂಡು ಈ ಮಂತ್ರವನ್ನು ಹೇಳುವ ಪರಿಪಾಠ ಬೆಳೆದುಬಂದಿದೆ.

ಪೂರ್ಣ ಪಾಠ ಈ ಕೆಳಗಿನಂತಿದೆ
ಓಂ ಭೂರ್‍ಭುವಃಸ್ವಃ
ತತ್‌ಸವಿತುರ್‍ವರೇಣ್ಯಂ 
ಭರ್ಗೋ ದೇವಸ್ಯ ಧೀಮಹಿ! 
ಧಿಯೋ ಯೋ ನಃ ಪ್ರಚೋದಯಾತ್‌ ॥

----
೨. ಗಾಯತ್ರಿ ಛಂದಸ್ಸು.
ಇದು ಮೂರು ಮೂರು ಸಾಲುಗಳನ್ನು ಹೊಂದಿರುವ ಛಂದಸ್ಸು. ಒಂದೊಂದು ಸಾಲಿನಲ್ಲೂ ಎಂಟು ಅಕ್ಷರಗಳು ಇರುತ್ತವೆ.  ಒಟ್ಟು ೨೪ ಅಕ್ಷರಗಳು ಉಳ್ಳದ್ದು. ಕೆಳಗಿನ ಸವಿತೃಮಂತ್ರವು ಗಾಯತ್ರಿ ಛಂದಸ್ಸಿನಲ್ಲಿ ಬರೆಯಲ್ಪಟ್ಟಿದೆ.

ಸಾಲು ೧:: (೮ ಅಕ್ಷರಗಳು)
ತತ್ + ಸ + ವಿ + ತುರ್ + ವ + ರೇ + ಣಿ + ಯಂ

ಸಾಲು ೨:: (೮ ಅಕ್ಷರಗಳು)
ಭರ್ + ಗೋ + ದೇ + ವ + ಸ್ಯ + ಧೀ + ಮ + ಹಿ

ಸಾಲು ೩:: (೮ ಅಕ್ಷರಗಳು)
ಧಿ + ಯೋ + ಯೋ + ನಃ + ಪ್ರ + ಚೋ + ದ + ಯಾತ್ 

----
೩. ಗಾಯತ್ರಿ ದೇವತೆ:: 
ಒಂದು ದೇವತೆಯಾಗಿ ಗಾಯತ್ರಿ ಯ ಕಲ್ಪನೆ ತುಂಬಾ ಇತ್ತೀಚಿನದ್ದು. ೧೬ - ೧೭ ನೇ ಶತಮಾನಕ್ಕೂ ಇತ್ತೀಚಿನದ್ದು‌ ಮತ್ತು ಈ‌ ಕಲ್ಪನೆ ಆಂಧ್ರಪ್ರದೇಶದಲ್ಲಿ ಹುಟ್ಟಿತು ಎನ್ನುವರು.

----
೪. ಮಂತ್ರ - ಗಾಯತ್ರಿ ಪದಗಳ ಬೇರರಿಮೆ.
"ಮನನಾತ್ ತ್ರಾಯತೇ ಇತಿ‌ ಮಂತ್ರಃ" ಎಂದು ಮಂತ್ರಕ್ಕೆ ನಿರುಕ್ತ (ಬೇರರಿಮೆ / Etymology) ಹೇಳಲಾಗಿದೆ.  "ಮನನಾತ್‌ತ್ರಾಯತೇ ಯಸ್ಮಾತ್ತಸ್ಮಾನ್ಮಂತ್ರೋ಼sಯಮೀರಿತಃ" ಎಂಬ ಸ್ಕಾಂದಪುರಾಣದ ಸಾಲೂ ಇದೆ. ಮನನ ಎಂದರೆ ಮೇಲಿಂದ ಮೇಲೆ ಯುಕ್ತಿಯಿಂದ ಧ್ಯಾನಿಸುವುದು. ಮನನ‌ದಿಂದ ನಮ್ಮನ್ನು ರಕ್ಷಿಸುವುದರಿಂದ / ಕಾಪಾಡುವುದರಿಂದ ಇದು ಮಂತ್ರವೆನಿಸಿಕೊಳ್ಳುವುದು. 

ಗಾಯತ್ರಿ / ಗಾಯತ್ರ ಕ್ಕೂ ಇದೇ ತರದ ಬೇರರಿಮೆಯನ್ನೇ ಹೇಳಲಾಗಿದೆ. ಗಾಯತ್ರಕ್ಕೆ  "ಗಾಯಂತಾಂ ತ್ರಾಯತೇ ಯಸ್ಮಾತ್ ಇತಿ ಗಾಯತ್ರಾ" ಎನ್ನುವ ನಿರುಕ್ತ / ಬೇರರಿಮೆ ಹೇಳಲಾಗಿದೆ. ಯಾವುದನ್ನು ಉಲಿಯುವುದರಿಂದ ನಾವು ಕಾಪಾಡಲ್ಪಡುತ್ತೇವೋ ಅದು ಗಾಯತ್ರಿ. 

೫. ರುದ್ರ / ಶಿವ / ಮಹೇಶ ಗಾಯತ್ರಿ ಗಳು 
ಈ ಗಾಯತ್ರಿಮಂತ್ರ (ಮೂರು ಸಾಲಿನ ಪದ್ಯ) ಅದೆಷ್ಟು ಹೆಸರುವಾಸಿ ಎಂದರೆ ಇದೇ ದಾಟಿಯಲ್ಲಿ ಹಲವಾರು ಮಂತ್ರಗಳ ಹುಟ್ಟಿಗೆ ಕಾರಣವಾಯ್ತು. ಕೆಲವು ರುದ್ರ / ಶಿವನ ಮತ್ತವನ ಪರಿವಾರದದವರ ಮೇಲಿನ ಗಾಯತ್ರಿಮಂತ್ರಗಳನ್ನು ಇಲ್ಲಿ ‌ಪಟ್ಟಿಮಾಡುತ್ತಿರುವೆ. ಇವನ್ನು ಲಿಂಗಪುರಾಣ ದಿಂದ ತೆಗೆದುಕೊಂಡಿದ್ದೇನೆ.

೧. ಮಹೇಶ_ಗಾಯತ್ರಿ

ತನ್ಮಹೇಶಾಯ ವಿದ್ಮಹೇ 
ವಾಗ್ವಿಶುದ್ಧಾಯ ಧೀಮಹಿ |
ತನ್ನಃ ಶಿವಃ ಪ್ರಚೋದಯಾತ್‌ ||

೨. ರುದ್ರ_ಗಾಯತ್ರಿ

ತತ್ಪುರುಷಾಯ ವಿದ್ಮಹೇ 
ಮಹಾದೇವಾಯ ಧೀಮಹಿ |
ತನ್ನೋ ರುದ್ರಃ ಪ್ರಚೋದಯಾತ್‌ ||

೩. 
ತತ್ಪುರುಷಾಯ ವಿದ್ಮಹೇ 
ವಾಗ್ವಿಶುದ್ಧಾಯ ಧೀಮಹಿ ।
ತನ್ನಃ ಶಿವಃ ಪ್ರಚೋದಯಾತ್‌ ||

೪. 
ಸರ್ವೇಶ್ವರಾಯ ವಿದ್ಮಹೇ 
ಶೂಲಹಸ್ತಾಯ ಧೀಮಹಿ |
ತನ್ನೋ ರುದ್ರಃ ಪ್ರಚೋದಯಾತ್‌ ||

ಉಳಿದ ಮೂಲದಿಂದ: 
೫. ಓಂ
ಮಹಾದೇವಾಯ ವಿದ್ಮಹೇ, 
ರುದ್ರ‌ಮೂರ್ತಯೇ ಧೀಮಹಿ
ತನ್ನೋ ಶಿವಃ ಪ್ರಚೋದಯಾತ್ ||

೬. ಓಂ
ಸದಾಶಿವಾಯ ವಿದ್ಮಹೇ,  
ಸಹಸ್ರಾಕ್ಷಾಯ ಧೀಮಹಿ |
ತನ್ನಃ ಸಾಂಬಃ ಪ್ರಚೋದಯಾತ್ ||

ಈ‌ ಕೆಳಗಿನವು ನೋಡಲು ಗಾಯತ್ರಿ ಛಂದಸ್ಸಿನಲ್ಲಿ ಇರುವಂತೆ ಕಂಡರೂ ಕೆಲಸ ಸಾಲುಗಳಲ್ಲಿ ಎಂಟರ ಬದಲು ಒಂಬತ್ತು ಅಕ್ಷರಗಳಿವೆ.

೭. ಓಂ 
ಮಲ್ಲಿಕಾರ್ಜುನಾಯ ವಿದ್ಮಹೇ,  (೯)
ಶ್ರೀ ಶೈಲನಾಥಾಯ ಧೀಮಹಿ | (೯)
ತನ್ನೋ ರುದ್ರಃ ಪ್ರಚೋದಯಾತ್ || 

----
೬. ಶಿವನ ಪರಿವಾರ ದೇವತೆಗಳ ಮೇಲಿನ ಗಾಯತ್ರಿ ಗಳು

ಗಣಾಂಬಿಕಾಯೈ ವಿದ್ಮಹೇ ಕರ್ಮಸಿದ್ಧ್ಯೈ ಚ ಧೀಮಹಿ ।
ತನ್ನೋ ಗೌರೀ ಪ್ರಚೋದಯಾತ್‌ ||

ಕಾತ್ಯಾಯನ್ಯೈ ವಿದ್ಮಹೇ ಕನ್ಯಾಕುಮಾರ್ಯೈ ಧೀಮಹಿ ।
ತನ್ನೋ ದುರ್ಗಾ ಪ್ರಚೋದಯಾತ್‌ ||

ವೀರಭದ್ರಾಯ ವಿದ್ಮಹೇ ಮಹಾನಾದಾಯ ಧೀಮಹೇ |  
ತನ್ನಃ ಶಾಂತಃ ಪ್ರಚೋದಯಾತ್ ||

ತತ್ಪುರುಷಾಯ ವಿದ್ಮಹೇ ವಕೃತುಂಡಾಯ ಧೀಮಹಿ ।
ತನ್ನೋ ದಂತಿಃ ಪ್ರಚೋದಯಾತ್‌ ||

ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ I 
ತನ್ನೊ ದಂತೀ ಪ್ರಚೋದಯಾತ್‌ ॥

ಮಹಾಸೇನಾಯ ವಿದ್ಮಹೇ ವಾಗ್ವಿಶುದ್ಧಾಯ ಧೀಮಹಿ ।
ತನ್ನಃ ಸ್ಕಂದಃ ಪ್ರಚೋದಯಾತ್‌ ||

ಹರಿವಕ್ತ್ರಾಯ ವಿದ್ಮಹೇ ರುದ್ರ ವಕ್ತ್ರಾಯ ಧೀಮಹಿ । 
ತನ್ನೋ ನಂದೀ ಪ್ರಚೋದಯಾತ್‌

ತೀಕ್ಷ್ಣ ಶೃಂಗಾಯ ವಿದ್ಮಹೇ ವೇದಪಾದಾಯ ಧೀಮಹಿ।
ತನ್ನೋ ವೃಷಃ ಪ್ರಚೋದಯಾತ್ ||

ಶಿವಾಸ್ಯಜಾಯೆ ವಿದ್ಮಹೇ ದೇವರೂಪಾಯೈ ಧೀಮಹಿ  |
ತನ್ನೋ ವಾಚಾ ಪ್ರಚೋದಯಾತ್‌  ||