ಗುರುವಾರ, ಡಿಸೆಂಬರ್ 31, 2009

ಬ್ರಾಂತು ಸೂತಕ ಕ್ರಿಯೆ!

ಅಟ್ಟುದನಡುವರೆ, ಸುಟ್ಟುದ ಸುಡುವರೆ ?
ಬೆಂದ ನುಲಿಯ ಸಂಧಿಸಬಹುದೆ?
ಪಂಚಾಕ್ಷರೀಯಲ್ಲಿ ಧಗ್ದವಾದ ನಿರ್ದೇಹಿಗೆ ಸಂದೇಹವುಂಟೆ?
ದಗ್ಧಸ್ಯ ದಹನಮ್‍ ನಾಸ್ತಿ, ಪಕ್ವಸ್ಯ ಪಚನಂ ಯಥಾ|
ಜ್ಞಾನಾಗ್ನಿದಗ್ಧದೇಹಸ್ಯ ನ ಪುನರ್ದಹನಕ್ರಿಯಾ||
ಇದು ಕಾರಣ ಕೂಡಲಚೆನ್ನಸಂಗನ ಶರಣರು ಬ್ರಾಂತು ಸೂತಕ ಕ್ರಿಯಾವಿಹಿತರು!!


                                     ... ಚನ್ನಬಸವಣ್ಣ


Get this widget
|
Track details
|
eSnips Social DNA

ಭಾನುವಾರ, ಡಿಸೆಂಬರ್ 27, 2009

ಎಲ್ಲಿಯದೋ ನಿರ್ವಾಣ!

ತನು ನಿರ್ವಾಣವೋ, ಮನ ನಿರ್ವಾಣವೋ,
ಭಾವ ನಿರ್ವಾಣವೋ, ವಿವಿಧ ತನಗಿಲ್ಲದ ನಿರ್ವಾಣವೋ,
ಇದನಾ ನುಡಿಯಲಂಜುವೆ, ತೊಟ್ಟ ವ್ರತ ಧರ್ಮಕ್ಕೆ ಬೇಡುವೆ
ಲೆಕ್ಕವಿಲ್ಲದೆ ಆಸೆ ಮನದೊಳಗೆ ಉಕ್ಕುತ್ತಿರುವಾಡುತ್ತ
ಇಂತಿ ಚಿಕ್ಕಮಕ್ಕಳಿಗೆಲ್ಲಿಯದೋ ನಿರ್ವಾಣ
ಘಟ್ಟಿವಾಳಂಗಲ್ಲದೆ ನಿ:ಕಳಂಕಮಲ್ಲಿಕಾರ್ಜುನ

                     ... ಮೋಳಿಗೆಯ ಮಾರಿತಂದೆ


Get this widget
|
Track details
|
eSnips Social DNA

ವಿಷಯದ ದೃಷ್ಟಿಯಿಂದ ಇದು ಒಂದು ಸಾಮಾನ್ಯ ಮಟ್ಟದ ( ಈ ಮಟ್ಟದ ವಚನಗಳು ಅನೇಕಾನೇಕವಿವೆ) ವಚನವಾದರೂ ಇಲ್ಲಿ ಶಶಿಯವರ ಧ್ವನಿಯಲ್ಲಿ ಅತ್ಯುತ್ತಮವಾಗಿ ಮೂಡಿ ಬಂದಿದೆ. ಶಶಿ ಅವರಿಗೆ ಧನ್ಯವಾದಗಳು.

ಲೋಕದ ಡೊಂಕ

ಲೋಕದ ಡೊಂಕ ನೀವೇಕೆ ತಿದ್ದುವಿರಿ
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ
ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ
ಕೂಡಲ ಸಂಗಮ ದೇವ
                    ..............ಬಸವಣ್ಣ


Get this widget
|
Track details
|
eSnips Social DNA

ಶನಿವಾರ, ಡಿಸೆಂಬರ್ 26, 2009

ನಿರ್ವಯಲಾದೆನು!

ಬ್ರಹ್ಮಸೂತ್ರವ ಬಲಿದು ವರ್ಮಾದಿ ವರ್ಮದಲಿ
ಕರ್ಮವನು  ಕಳೆದು ನಿರ್ವಯಲಾದೆನು ||

ಅಷ್ಟದಳ ಮಂಟಪದ ಅಷ್ಟ ಕೊನೆಗೊಳಳಗೆ
ಅಷ್ಟಲಿಂಗಾರ್ಚನೆಯಾ ಅಷ್ಟ ಪೂಜೆ
ಅಷ್ಟಲಿಂಗಾರ್ಪಿತವು ದೃಷ್ಟ ಪ್ರಸಾದದಿಂ
ನಿಷ್ಠೆ ನಿಜದಲ್ಲಿ ನಿರಂಜನವ ಕಂಡೆನು

ಬ್ರಹ್ಮಸೂತ್ರವ ಬಲಿದು ವರ್ಮಾದಿ ವರ್ಮದಲಿ
ಕರ್ಮವನು  ಕಳೆದು ನಿರ್ವಯಲಾದೆನು ||


ಆರು ನೆಲೆ ಮಂಟಪದ ಮೂರು ಕೋಣೆಗಳೊಳಗೆ
ಬೇರೊಂದು ಸ್ಥಾನದಲಿ ಲಿಂಗವಿಹುದು
ಆರು ನೆಲೆಯನು ಮೀರಿ ಮೂರು ಬಾಗಿಲು ಮುಚ್ಚಿ
ಮೀರಿ ಕಂಡೆನು ಮಹಾಘನ ಲಿಂಗವ 

ಬ್ರಹ್ಮಸೂತ್ರವ ಬಲಿದು ವರ್ಮಾದಿ ವರ್ಮದಲಿ
ಕರ್ಮವನು  ಕಳೆದು ನಿರ್ವಯಲಾದೆನು ||


ಆಕಾಶದಾ  ಮೇಲೆ ನಿರಂತರ ಸ್ಥಾನದಲಿ
ಲೋಕವನು ಹೊದ್ದರಾ ಶಿವ ನಿಲಯವು    
ಏಕಾಂತ ವಾಸದೊಳೇಕೀತರನ ಪೂಜೆ
ಓಂಕಾರ ಮಂತ್ರದಲಿ ಗೋಪ್ಯ ಗೋಪ್ಯಮ್

ಬ್ರಹ್ಮಸೂತ್ರವ ಬಲಿದು ವರ್ಮಾದಿ ವರ್ಮದಲಿ
ಕರ್ಮವನು  ಕಳೆದು ನಿರ್ವಯಲಾದೆನು ||

ಚಂದ್ರ ಸೂತ್ರದ ತೆರದಿ ನಿರಂತರಮ್  ನಿಜವಿಡಿದು
ಮಂತ್ರ ಭೇಧವನರಿದು ಸಂತೈಸುತ 
ನಿಶ್ಚಿಂತ ನಿರ್ಜಾತ ನಿರ್ವಯಲ ಮೀರಿದ
ಮಹಾಂತ ಕೂಡಲಚನ್ನಸಂಗಯ್ಯನು 

ಬ್ರಹ್ಮಸೂತ್ರವ ಬಲಿದು ವರ್ಮಾದಿ ವರ್ಮದಲಿ
ಕರ್ಮವನು  ಕಳೆದು ನಿರ್ವಯಲಾದೆನು ||

                              ......................ಚನ್ನಬಸವಣ್ಣ



Get this widget
|
Track details
|
eSnips Social DNA


ಸಂಗೀತ ಮತ್ತು ಗಾಯನ : ಕಸ್ತೂರಿ ಶಂಕರ್

ಬುಧವಾರ, ಡಿಸೆಂಬರ್ 23, 2009

ಪ್ರಾಣಲಿಂಗಿ ಸ್ಥಲಂ ಭವೇತ್

ಅರ್ಪಿತವೆಂದಡೆ ಕಲ್ಪಿತವಾಯಿತ್ತು
ಕಲ್ಪಿತವೆಂದಡೆ ಅರ್ಪಿತವಾಯಿತ್ತು 
ಅರ್ಪಿತವನೂ ಕಲ್ಪಿತವನೂ ಅದೆಂತರ್ಪಿತವೆಂಬೆ
ಶಿವಾತ್ಮಕ ಸುಖಂ ಜೀವೋ| ಜೀವಾತ್ಮಜ ಸುಖಂ ಶಿವ:||
ಶಿವಸ್ಯ ಜೀವಸ್ಯ ತುಷ್ಟ್ಯಂ| ಪ್ರಾಣಲಿಂಗಿ ಸ್ಥಲಂ ಭವೇತ್||
ಇಂತೆದುದಾಗಿ ಅರಿವರ್ಪಿತ ಮರಹು ಅನಾರ್ಪಿತ
ಎನ್ನ ಸ್ವಾಮಿ ಘಂಟೇಶ್ವರ ಲಿಂಗಕ್ಕೆ


Get this widget
|
Track details
|
eSnips Social DNA

ಗುರು ಭಕ್ತಯ್ಯನ ಈ ವಚನ ಪ್ರಾಣಲಿಂಗಿ ಸ್ಥಲವನ್ನು ವರ್ಣಿಸುತ್ತೆ.

ಶುಕ್ರವಾರ, ಡಿಸೆಂಬರ್ 04, 2009

ತೋರಿತ್ತಾದಡೆ ವಿಷಯ; ತೋರದಿದ್ದಡೆ ಶೂನ್ಯ!

ಅರಿದಡೆ ಆತ್ಮನಲ್ಲ ; ಅರಿಯದಿದ್ದಡೆ ಆತ್ಮನಲ್ಲ;
ತೋರಿತ್ತಾದಡೆ ವಿಷಯ; ತೋರದಿದ್ದಡೆ ಶೂನ್ಯವೆನಿಸುಗು ;
ಬೊಮ್ಮದ ಅರಿವಿನ್ನೆಲ್ಲಿಯದೋ ?
ಅವು ತಾನರಿವಾಗಿದ್ದು , ಸ್ವಾನುಭಾವದ ಹೊರೆಯಲ್ಲಿದ್ದು,
ಸನ್ನಿಧಿ, ನಿತ್ಯನಿಜಾನನ್ದಾತ್ಮ
ಉರಿಲಿಂಗ ಪೆದ್ಡಿ ಪ್ರಿಯ ವಿಶ್ವೇಶ್ವರನೆನ್ದರಿವುದು.

                                            .......ಉರಿಲಿಂಗ ಪೆದ್ಡಿ



Get this widget
|
Track details
|
eSnips Social DNA

ಈ ವಚನವನ್ನು ಹೆಂಗೆ ಅರ್ಥ ಮಾಡಿಕೊಳ್ಳಬೇಕೋ ತಿಳಿಲಿಲ್ಲ. ನೀವು ಯಾರಾದರೂ ಈ ಬಗ್ಗೆ ಬರೀತೀರ?

ಬುಧವಾರ, ಡಿಸೆಂಬರ್ 02, 2009

ಕಾಯಕ ನಿರುತನಾದರೆ!

ಕಾಯಕ ನಿರುತನಾದರೆ ಗುರುದರುಶನವಾದರೂ ಮರೆಯಬೇಕು
ಲಿಂಗ ಪೂಜೆಯಾದರೂ ಮರೆಯಬೇಕು
ಜಂಗಮ ಮುಂದಿದ್ದರೂ ಹಂಗು ಹರಿಯಬೇಕು
ಕಾಯ್ಯಕ ಕೈಲಾಸವಾದ ಕಾರಣ
ಅಮರೇಶ್ವರ ಲಿಂಗವಾಯಿತ್ತಾದರೂ ಕಾಯಕದೊಳಗು
------ಆಯ್ದಕ್ಕಿ ಮಾರಯ್ಯ


Get this widget
|
Track details
|
eSnips Social DNA

ಮಂಗಳವಾರ, ಡಿಸೆಂಬರ್ 01, 2009

ಛಲ ಬೇಕು ಶರಣಂಗೆ !

ಛಲ ಬೇಕು ಶರಣಂಗೆ  ಪರಧನವನೊಲ್ಲೆನೆಂಬ 
ಛಲ ಬೇಕು ಶರಣಂಗೆ  ಪರಸತಿಯನೊಲ್ಲೆನೆಂಬ 
ಛಲ ಬೇಕು ಶರಣಂಗೆ  ಪರದೈವವನೊಲ್ಲೆನೆಂಬ 
ಛಲ ಬೇಕು ಶರಣಂಗೆ ಲಿಂಗ ಜಂಗಮ ಒಂದೇ ಎಂಬ
ಛಲ ಬೇಕು ಶರಣಂಗೆ ಪ್ರಸಾದ ದಿಟವೆಂಬ
ಛಲವಿಲ್ಲದವರ ಮೆಚ್ಚ ನಮ್ಮ ಕೂಡಲ ಸಂಗಮ ದೇವ  



Get this widget
|
Track details
|
eSnips Social DNA

ಭಾನುವಾರ, ನವೆಂಬರ್ 29, 2009

ಚುಳುಕು!

ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ
ಪಾತಾಳದಿಂದತ್ತ ನಿಮ್ಮ ಶ್ರೀಚರಣ
ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀಮಕುಟ
ಅಗಮ್ಯ ಅಗೋಚರ ಅಪ್ರತಿಮ ಲಿಂಗವೇ
ಕೂಡಲಸಂಗಮ ದೇವ.
ಎನ್ನ ಕರಸ್ಥಳಕೆ ಬಂದು ಚುಳುಕಾಗಿರಯ್ಯ


ಈ ವಚನವನ್ನು ಬೇರೆ ಬೇರೆ ಗಾಯಕರ ಧ್ವನಿಯಿಂದ ಇಲ್ಲಿ ಕೇಳಬಹುದು.


Get this widget
|
Track details
|
eSnips Social DNA

.................................

Get this widget | Track details | eSnips Social DNA

.................................

ಶನಿವಾರ, ನವೆಂಬರ್ 28, 2009

ಆರಿಗಾರೂ ಇಲ್ಲ,ಕೆಟ್ಟವಂಗೆ ಕೆಳೆಯಿಲ್ಲ


ಚಂದ್ರೋದಯಕೆ ಅಂಬುಧಿ ಹೆಚ್ಚುವುದಯ್ಯ
ಚಂದ್ರ ಕುಂದೆ ಕುಂದುವುದಯ್ಯಾ,

ಹುಣ್ಣಿಮೆಯಂದು ಸಮುದ್ರದಲ್ಲಿ ಅಬ್ಬರಗಳು ಸಹಜ. ಸಮುದ್ರ ನೀರಿನ ಮಟ್ಟ ಹೆಚ್ಚುತ್ತದೆ. ಚಂದ್ರ ಮರೆಯಾದಾಗ / ಅಮವಾಸ್ಯೆಯಲ್ಲಿ ಸಮುದ್ರದ ನೀರಿನ ಮಟ್ಟ ಕುಂದುತ್ತದೆ. ಚಂದ್ರನ ಗುರುತ್ವಾಕರ್ಷಣೆ ನೀರಿನ ಮಟ್ಟದ ಏರಿಳಿತಕ್ಕೆ ಕಾರಣ ವಾಗುತ್ತದೆ ಅನ್ನೋದು ತಿಳಿದ ವಿಷಯವೇ. 


ಚಂದ್ರ ( ಹುಣ್ಣಿಮೆಯೆಡೆಗೆ) ಬೆಳೆದಂತೆ ಸಮುದ್ರ (ರಾಜ?)ನೂ ಹಿಗ್ಗಿ ಏರಿಳಿಯುತ್ತಾನೆ. ಚಂದ್ರ ಕಳೆಗುಂದಿದರೆ (ಅಮಾವಾಸ್ಯೆ), ಸಾಗರ ರಾಜನೂ ಸಪ್ಪಗಾಗುತ್ತಾನೆ. ಹೀಗಿದೆ ಚಂದ್ರ ಸಮುದ್ರರ ಪ್ರೀತಿ. 


ಬಸವಣ್ಣನವರು ಈ ಪ್ರಕೃತಿ ಸಹಜ ಸಂಬಂಧದ ಗಮನಿಸುವಿಕೆಯನ್ನು ತನ್ನ ವಚನದಲ್ಲಿ, ಸೂಕ್ತ ಜಾಗದಲ್ಲಿ ಬಳಸಿಕೊಂಡಿರುವುದನ್ನು ನಾವು ಗಮನಿಸಬೇಕು.

ಚಂದ್ರಂಗೆ ರಾಹು ಅಡ್ಡ ಬಂದಲ್ಲಿ ಅಂಬುಧಿ ಬೊಬ್ಬಿಟ್ಟಿತ್ತೇ ಅಯ್ಯಾ ?

ಪುರಾಣಗಳಲ್ಲಿ ಅಗಸ್ತ್ಯ ಮುನಿ ಸಮುದ್ರವನ್ನು ಪೂರ್ತಿ ಕುಡಿದು ಬರಿದು ಮಾಡುವ ಕಥೆ ಬರುತ್ತೆ. ಅಂತ ಸಂದರ್ಭದಲ್ಲಿ ಸಮುದ್ರವನ್ನು ಉಳಿಸಲು ಚಂದ್ರ ಏನೂ ಮಾಡಲಿಲ್ಲ.   

ಅಂಬುಧಿಯ ಮುನಿ ಆಪೋಶನವ ಕೊಂಬಲ್ಲಿ ಚಂದ್ರಮನಡ್ಡ ಬಂದನೆ ಅಯ್ಯಾ ?

ಚಂದ್ರ ಗ್ರಹಣದಂದು ರಾಹು ಚಂದ್ರನನ್ನು ಹಿಡಿಯುತ್ತಾನೆ ಅನ್ನೋದು ಒಂದು ಕಥೆ. (ಇದಕ್ಕೆ ಬೇರೆ ವ್ಯಾಖ್ಯಾನ ಏನೇ ಇರಲಿ!). ಇಂತ ಗ್ರಹಣದಂದು ರಾಹು ಚಂದ್ರನನ್ನು ಹಿಡಿಯಲು ಬಂದಾಗ ಸಮುದ್ರ ರಾಜ ಚಂದ್ರನನ್ನು ಬಿಡಿಸಲು ಏನೂ  ಮಾಡಲಿಲ್ಲ. 
(ofcourse ನಮ್ಮ ಅನೇಕ ಋಷಿ ಮುನಿಗಳು ತಮ್ಮ ತಪ ಶಕ್ತಿ ಇಂದಲೋ ಅಥವಾ ತಮ್ಮ ವೀರ್ಯವೇ ಮುಂತಾದ ವಸ್ತುಗಳನ್ನು ದಾನ ಮಾಡಿಯೋ ಸೂರ್ಯನನ್ನು / ಚಂದ್ರನನ್ನು ಕೇತು / ರಾಹು ಗಳಿಂದ ಕಾಪಾಡಿರುವ ಕಥೆಗಳಿವೆ)


ಆರಿಗಾರೂ ಇಲ್ಲ, ಕೆಟ್ಟವಂಗೆ ಕೆಳೆಯಿಲ್ಲ
ಜಗದ ನಂಟ ನೀನೇ ಅಯ್ಯಾ ಕೂಡಲಸಂಗಮದೇವ.


ಹೀಗೆ ಉದಾಹರಣೆ ಕೊಡುತ್ತ, ಯಾರಿಗೆ ಯಾರೂ ಇಲ್ಲ , ಕೆಟ್ಟವನಿಗೆ  ಒಳ್ಳೆಯ ಭವಿಷ್ಯವಿಲ್ಲ, ಅನ್ನುತ್ತಾ, ತುಂಬಾ ಪ್ರಾಕ್ಟಿಕಲ್ ಅರಿಕೆ ಯನ್ನು ಹೇಳುವ ಈ ವಚನ ವನ್ನು ಇಲ್ಲಿ ಕೇಳಬಹುದು.


Get this widget
|
Track details
|
eSnips Social DNA



ಚಂದ್ರೋದಯಕೆ ಅಂಬುಧಿ ಹೆಚ್ಚುವುದಯ್ಯ.
ಚಂದ್ರ ಕುಂದೆ ಕುಂದುವುದಯ್ಯಾ,
ಚಂದ್ರಂಗೆ ರಾಹು ಅಡ್ಡ ಬಂದಲ್ಲಿ
ಅಂಬುಧಿ ಬೊಬ್ಬಿಟ್ಟಿತ್ತೇ ಅಯ್ಯಾ ?
ಅಂಬುಧಿಯ ಮುನಿ ಆಪೋಶನವ ಕೊಂಬಲ್ಲಿ
ಚಂದ್ರಮನಡ್ಡ ಬಂದನೆ ಅಯ್ಯಾ ?
ಆರಿಗಾರೂ ಇಲ್ಲ, ಕೆಟ್ಟವಂಗೆ ಕೆಳೆಯಿಲ್ಲ
ಜಗದ ನಂಟ ನೀನೇ ಅಯ್ಯಾ ಕೂಡಲಸಂಗಮದೇವ.

 ...............................................



ಕೆಳೆ ಅನ್ನುವ ಅದಕ್ಕೆ ಅರ್ಥ::



ಕೆಳೆ (ನಾಮಪದ) ::  ೧ ಸ್ನೇಹ, ಗೆಳೆತನ, ಮೈತ್ರಿ ೨ ಸ್ನೇಹಿತ, ಗೆಳೆಯ, ಮಿತ್ರ


ಪ್ರೊ. ಡಿ. ಎನ್. ಶಂಕರ ಭಟ್ ಅವರ “ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು” ನಿಘಂಟು

companion (ನಾಮಪದ) :: ಕೇಳ (ಕೆಳದಿ; ಕೆಳೆಯ), ಒಡನಾಡಿ (ಒಡನಾಟ; ಒಡನಾಡು), ಹತ್ತಿಗ, ತಹಿಕಾರ
mate (ನಾಮಪದ) :: ಕೆಳ (ಕೆಳೆಯ, ಕೆಳದಿ), ಗಂಡ, ಹೆಂಡತಿ

ಮಂಗಳವಾರ, ನವೆಂಬರ್ 24, 2009

ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ!

ನನಗೆ ಇದುವರಗೆ ತುಂಬ ಇಷ್ಟವಾದ ಸಾಹಿತ್ಯದಲ್ಲಿ ಭಾವಗೀತೆಗಳಿಗೆ ಬಹು ಮುಖ್ಯ ಜಾಗವಿದೆ.

ನನ್ನ ಇಷ್ಟದ 'ಕೆಲ' ಭಾವಗೀತೆಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.

ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ... ..ಕುವೆಂಪು.



baa illi sambavisu...

ಸಾಹಿತ್ಯ :: 

ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ
ನಿತ್ಯವೂ ಅವತರಿಪ ಸತ್ಯಾವತಾರಾ..

ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ
ನಿತ್ಯವೂ ಅವತರಿಪ ಸತ್ಯಾವತಾರಾ..

ಮಣ್ಣಾಗಿ ಮರವಾಗಿ ಮಿಗವಾಗಿ ಖಗವಾಗೀ..
ಮಣ್ಣಾಗಿ ಮರವಾಗಿ ಮಿಗವಾಗಿ ಖಗವಾಗಿ
ಭವ ಭವದಿ ಭವಿಸಿಹೇ ಭವ ವಿದೂರಾ

ನಿತ್ಯವೂ ಅವತರಿಪ ಸತ್ಯಾವತಾರಾ 
ನಿತ್ಯವೂ ಅವತರಿಪ ಸತ್ಯಾವತಾರಾ

|| ಬಾ ಇಲ್ಲಿ ||

ಮಣ್ ತನಕೆ ಮರತನಕೆ ಮಿಗತನಕೆ ಖಗತನಕೆ
ಮಣ್ತನಕೆ ಮರತನಕೆ ಮಿಗತನಕೆ ಖಗತನಕೆ
ಮುನ್ನಡೆಗೆ ಕಣ್ಣಾದ ಗುರುವೆ ಬಾರಾ
ಮೂಡಿ ಬಂದೆನ್ನಾ  ನರ ರೂಪ ಚೇತನದೀ...
ಮೂಡಿ ಬಂದೆನ್ನಾ ನರ ರೂಪ ಚೇತನದಿ
ನಾರಾಯಣತ್ವಕ್ಕೆ  ದಾರಿ ತೋರ
ನಿತ್ಯವೂ ಅವತರಿಪ ಸತ್ಯಾವತಾರ

|| ಬಾ ಇಲ್ಲಿ ||

ಅಂದು ಅರಮನೆಯಲ್ಲಿ, ಮತ್ತೆ ಸೆರೆಮನೆಯಲ್ಲಿ
ಅಲ್ಲಿ ತುರುಪಟ್ಟಿಯಲಿ, ಇಲ್ಲಿ ಕಿರುಗುಡಿಸಲಲಿ,

ಅಂದು ಅರಮನೆಯಲ್ಲಿ, ಮತ್ತೆ ಸೆರೆಮನೆಯಲ್ಲಿ

ಅಲ್ಲಿ ತುರುಪಟ್ಟಿಯಲಿ, ಇಲ್ಲಿ ಕಿರುಗುಡಿಸಲಲಿ,

ದೇಶದೇಶದಿ ವೇಷವೇಷಾಂತರವನಾಂತು
ವಿಶ್ವಸಾರಥಿಯಾಗಿ ಲೀಲಾರಥವನೆಂತು
ಚೋದಿಸಿರುವೆಯೊ ಅಂತೆ, ಸೃಷ್ಟಿಲೋಲ ,
ಚೋದಿಸಿರುವೆಯೊ ಅಂತೆ, ಸೃಷ್ಟಿಲೋಲಾ,

ಅವತರಿಸು ಬಾ...
ಅವತರಿಸು ಬಾ...

ಅವತರಿಸು ಬಾ ಇಲ್ಲಿ ಇಂದೆನ್ನ ಚೈತ್ಯದಲಿ
ಹೇ ದಿವ್ಯ ಸಚ್ಚಿದಾನಂದ ಶೀಲ
ಹೇ ದಿವ್ಯ ಸಚ್ಚಿದಾನಂದ ಶೀಲ
ಹೇ ದಿವ್ಯ ಸಚ್ಚಿದಾನಂದ ಶೀಲ

ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ
ನಿತ್ಯವೂ ಅವತರಿಪ ಸತ್ಯಾವತಾರ


|| ಬಾ ಇಲ್ಲಿ ||

|| ಬಾ ಇಲ್ಲಿ ||
..
ನನಗೆ ತುಂಬಾ ಇಷ್ಟವಾದ ಇನ್ನೂ ಕೆಲವು ಭಾವಗೀತೆಗಳು ಈ ಕೆಳಗಿನವು.
ಮುಂದೆ ಅವುಗಳನ್ನು ಕೇಳಿಸುತ್ತೇನೆ.

>ಆನಂದಮಯ ಈ ಜಗ ಹೃದಯ... ಕುವೆಂಪು
>ಬಾ ಫಾಲ್ಗುಣ ರವಿ ದರ್ಶನಕೆ.. ಕುವೆಂಪು
>ದೀಪವು ನಿನ್ನದೇ ಗಾಳಿಯು ನಿನ್ನದೇ ಆರದಿರಲಿ ಬೆಳಕು..
>ತನುವು ನಿನ್ನದು ಮನವು ನಿನ್ನದು ..
>ಗಿಳಿಯು ಪಂಜರದೊಳಿಲ್ಲ..
>ಹಾಲು ಹಳ್ಳ ಹರಿಯಲೀ
ಇನ್ನೂ ....
ಇವುಗಳನ್ನು ಅದೆಷ್ಟು ಬಾರಿ ಕೇಳಿದ್ದೇನೋ ನನಗೆ ಗೊತ್ತಿಲ್ಲ.

ಎಲ್ಲೊ ಹುಡುಕಿದೆ ಇಲ್ಲದ ದೇವರ, ಯಾವ ಮೋಹನ ಮುರುಳಿ ಕರೆಯಿತೋ ...ಕೆಲವು ಹಾಡುಗಾರರು ಹಾಡಿರುವುದು ಮಾತ್ರ ಇಷ್ಟ ಆಗುತ್ತೆ.

ಒಂದೊಂದರ ಬಗ್ಗೆ ಯೂ ಉದ್ದಕ್ಕೆ ಬರೀಬೇಕು ಅಂತ ಆಸೆ. ಸಮಯವಿಲ್ಲ.

ಆಗಾಗ್ಗೆ ಸಿಕ್ಕ ಇವುಗಳ ಲಿಂಕ್ ಇಲ್ಲಿ ಸೇರ್ಸುತ್ತೇನೆ.

ಗುರುವಾರ, ನವೆಂಬರ್ 19, 2009

ತೊಟ್ಟಿಲು ಮುರಿದು ನೇಣು ಹರಿದು ಜೋಗುಳ ನಿಂತಲ್ಲದೆ!

ತುಂಬಾ ಹಿಂದೆ .. ಬಹುಶ ನಾಲ್ಕಾರು ತಿಂಗಳಾಗಿರಬಹುದು .. ಆಕಾಶವಾಣಿಯಲ್ಲಿ ಬೆಳಿಗ್ಗೆ ಪ್ರಸಾರವಾಗ್ತಾ ಇದ್ದ ಈ ಕಾರ್ಯಕ್ರಮವನ್ನು ರೆಕಾರ್ಡ್ ಮಾಡಿದ್ದೆ. ನಂತರ ಯಾವಾಗಲೋ ಅದನ್ನು ಕಂಪ್ಯೂಟರ್ ಗೆ ಕಾಪಿ ಮಾಡಿದ್ದೆ. ನನ್ನ ಮೊಬೈಲ್ ನಿಂದ ಇದು ಎಗರಿ ಹೋಗಿತ್ತು.

ಇಂದು ನನ್ನ ಕಂಪ್ಯೂಟರ್ ಅನ್ನು ತಡಕಾಡ್ತಾ ಇದ್ದಾಗ, ಆಕಸ್ಮಿಕವಾಗಿ ಈ ಕ್ಲಿಪ್ ಸಿಕ್ತು.


ಅಲ್ಲಮ ಪ್ರಭುಗಳ ವಚನಗಳು ನನಗೆ ತುಂಬಾ ಇಷ್ಟ. ಪರಮ ಅನುಭಾವದ ಮಾತುಗಳು ಅಲ್ಲಮನ ವಚನಗಳು.

ಈ clip ನ ವಚನಗಳು ಒಂದಕ್ಕಿಂತ ಒಂದು ಚೆಂದ. ಅದರಲ್ಲೂ  ಕೊನೆಯ (ಕೆಳಗಿನ) ವಚನ ತುಂಬಾ ಹಿಡಿಸಿತು.



     Get this widget
|
     Track details 
|
        eSnips Social DNA   


ಅಜ್ಞಾನವೆಂಬ ತೊಟ್ಟಿಲ ಒಳಗೆ ಜ್ಞಾನವೆಂಬ ಶಿಶುವ ಮಲಗಿಸಿ
ಸಕಲ ವೇದ ಶಾಸ್ತ್ರವೆಂಬ ನೇಣ ಕಟ್ಟಿ ಹಿಡಿದು ತೂಗಿ
ತಾ ಉಣಬಡುತ್ತಿದ್ದಾಳೆ ಭ್ರಾಂತಿಯೆಂಬ ತಾಯಿ
ತೊಟ್ಟಿಲು ಮುರಿದು ನೇಣು ಹರಿದು ಜೋಗುಳ ನಿಂತಲ್ಲದೆ
ಗುಹೆಶ್ವರಲಿಂಗನ ಕಾಣಬಾರದು.

ಗುರುವಾರ, ಏಪ್ರಿಲ್ 23, 2009

ಬಸವೇಶ್ವರ ಚರಿತ್ರೆ - ರುದ್ರ ಕವಿ



ಈ ಬಾರಿ ದಿನಾಂಕ ೨೭ ಆಪ್ರಿಲ್ ೨೦೦೯ನ ರಂದು ಬಸವ ಜಯಂತಿ ಬರುತ್ತಿದೆ.

ಬಸವಣ್ಣನ ಬಗ್ಗೆ ಅದೆಷ್ಟು ಓದಿದರೂ ನನಗೆ ಬೇಜಾರು ಅನ್ನಿಸಲ್ಲ. ಮತ್ತೆ ಮತೆ ಓದಬೇಕು ಅನ್ನಿಸುತ್ತೆ. ಅಂತಹ ವ್ಯಕ್ತಿತ್ವ ಆತನದ್ದು. ಇದು ಒಬ್ಬ ಭಕ್ತನ / ಅನುಯಾಯಿಯ ಮಾತಲ್ಲ. ಒಬ್ಬ ಸಹೃದಯನ / ಇತರರೆಡೆಗೆ ಕಳಕಳಿಯಿರುವ ಜನ ಸಾಮನ್ಯನ ಮಾತು.

ಬಸವಣ್ಣನ ಭಕ್ತಿ, ಅಲ್ಲಮನ ಅನುಭಾವ , ಚನ್ನ ಬಸವಣ್ಣನ ಜ್ಞಾನಕ್ಕೆ ಸರಿಸಾಟಿಯಿಲ್ಲ ಅನ್ನುತ್ತಾರೆ. ಈ ಮಾತುಗಳನ್ನು ನಾನಂತೂ ಒಪ್ಪುತ್ತೇನೆ.

ಬಸವ ಜಯಂತಿಯ ಈ ಸಂದರ್ಭದಲ್ಲಿ ಬಸವಣ್ಣನ ಬಗ್ಗೆ ಏನಾದರೂ ಬರೀಬೇಕು ಅನ್ನುಸ್ತ ಇದೆ. ಆದ್ರೆ ಅನೇಕರು ಈಗಾಗಲೆ ಮಾತಾಡಿದ್ದಾರೆ, ಬರೆದಿದ್ದಾರೆ. ನನ್ನ ಬರಹದಲ್ಲಿ ಹೊಸತನ್ನೇನೂ ನಾನು ಕೊಡಲಾಗುವುದಿಲ್ಲ ಅನ್ನುಸ್ತಾ ಇದೆ. ಹಾಗಾಗಿ ರುದ್ರ ಕವಿಯ “ಬಸವೇಶ್ವರ ಚರಿತ್ರೆ” ಸ್ವಲ್ಪ ಭಾಗವನ್ನು ಇಲ್ಲಿ ಹಾಕುತ್ತಿದ್ದೇನೆ.

ಈ ಪುಸ್ತಕದಲ್ಲಿ ೩೦ ಸಂಧಿಗಳಿವೆ. ಬಸವಣ್ಣನ ಜನನ – ಬೆಳವಣಿಗೆ ಬಗ್ಗೆ ಹೇಳುವ ೧೦ ನೇ ಸಂಧಿಯನ್ನು ಇಲ್ಲಿ ಹಾಕುತ್ತ ಇದ್ದೇನೆ.

”””””””””””””””””””’

ಸೂಚನೆ ::
ಬಸವ ರಾಜನ ಜನನವಾಯಿತು
ಎಸೆವ ಬಾಲ್ಯದ ಲೀಲೆ ತೋರಿದ
ಕುಶಲ ಮತಿಯೆಂದೆನಿಸಿ ಬೆಳೆದನು ಬಾಗೆವಾಡಿಯಲಿ


ಬಾಯಿಯಿಂ ಬ್ರಹ್ಮವನೆ ಪೇಳದ
ಹೇಯ ಕೃತ್ಯವ ಗೇಯಲಾರದ
ಮಾಯೆ ಮೋಹವ ಮೆಟ್ಟಿ ನಿಂತಿಹ ಧೀರ ಗಂಭೀರ
ಕಾಯದಲಿ ಸಂಯಮವ ತಾಳಿದ
ಕಾಯಕದಿ ಕೈಲಾಸ ಕಂಡಿಹ
ರಾಯವರ ಶಿವಲಿಂಗಯೋಗಿಯೆ ನಮನ ಮಾಡುವೆನು……………………..೧


ದೃಶ್ಟಿ ಪುಷ್ಟಿಗೆ ನದಿ ನದಂಗಳು
ಸೃಷ್ಟಿ ಸೌಂದರ್ಯದಲಿ ಹಿಮಗಿರಿ
ಕಷ್ಟವಿಲ್ಲದೆ ಧಾನ್ಯ ಬೆಳೆಯುವ ಪುಣ್ಯನೆಲವಿಹುದು
ಎಷ್ತೋ ಎತ್ತರ ಗಿಡ ಮರಂಗಳು
ತುಷ್ಟಿ ಬೀರುವ ಸುತ್ತು ಜಡಧಿಯು
ನಿಷ್ಟೆಯಿಂ ಕಟ್ಟಿರುವ ಗುಡಿಗಳ ನಾಡು ಭಾರತವು. …………………….೨


ಧರಣಿ ಮಂಡಲ ಮಧ್ಯವಿರುವುದು
ಪರಮ ಪಾವನ ನಮ್ಮ ದೇಶವು
ಭರಿತ ಶರಣರ ದಾಸ ಸಂತರ ಸಂತಸದ ನಾಡು
ಹರಿಯು ಹತ್ತವತಾರ ತಾಳಿದ
ಹರನ ಗಣಗಳು ಬಂದು ಹೋದರು
ನಿರುತ ಧರ್ಮದ ಹಿರಿಯ ಜಾಗೃತಿ ನಡೆದು ಬಿಟ್ಟಿಹುದು.............೩


ಶ್ರೇಷ್ಟ ಸೌಂದರ್ಯಾತಿಶಯದಿಂ
ತುಷ್ಟಿ ನಮ್ಮಯ ಮನಕೆ ದೊರೆವುದು
ಎಷ್ಟು ಪೊಗಳಿದರೇನು ತೃಪ್ತಿಯು ಸಿಕ್ಕದೀ ಮನಕೆ
ದೃಷ್ಟಿ ಪರಿಯುವ ವರೆಗು ನೋಡಲು
ಎಶ್ಟೋ ಬಗೆಯಲಿ ಸೊಬಗು ತೋರ್ವುದು
ಸೃಶ್ಟಿಕರ್ತನ ಜಾಣ್ಮೆಯಲ್ಲದೆ ನಮ್ಮದೇನಿಲ್ಲಿ.................೪


ಬೆಟ್ಟ ಪರ್ವತ ಗುಡ್ಡವದರೊಳು
ಹುಟ್ಟಿ ಹರಿಯುವ ನದಿ ನದಂಗಳು
ದಟ್ಟ ಕಾಡಿನ ಮಧ್ಯ ಚರಿಸುವ ಪಕ್ಷಿ ಮೃಗ ಜಂತು
ಅಟ್ಟಿ ಬರುತಿಹ ವನ್ಯ ಮೃಗಗಳು
ಬಿಟ್ಟೂ ಬಿಡದಲೆ ಸುರಿವದಬದಬೆ
ನೆಟ್ಟ ನೋಟದಿ ನೋಡೆ ಮನ ಸಂತಸದಿ ಕುಣಿವುದು................೫


ಇಂತ ಭಾರತದೇಶ ಮಧ್ಯದಿ
ಶಾಂತಿಯುತ ಕನ್ನಡದ ನಾಡಿದೆ
ಚಿಂತೆಯಿಲ್ಲದೆ ಸಂತಸವ ನಾಂತಿಹಳು ಪುಣ್ಯಮಯಿ
ಕಾಂತಿ ಬೀರುತ ಒಂದು ಕಡೆಯಲಿ
ನಿಂತು ಕೊಂಡಿದೆ ಬಾಗೆಬಾಡಿಯು
ಎಂತು ಪೇಳುವುದದರಹಿರಿಮೆಯ ಆಗದೆನ್ನಿಂದ ....................೬


ಅಂದು ಬಾಗೇವಾಡಿ ಪುರವಿದು
ಬಂಧುರತೆಯಿಂದಗ್ರಹಾರವು
ಹೊಂದಿಕೊಂಡೇ ಶೈವ ಬ್ರಾಹ್ಮಣರಿದ್ದರವರೆಲ್ಲಾ
ಒಂದೆ ಸವನೆ ಯಜ್ಞ ಯಾಗವ
ಅಂದವಾಗಿಯೇ ನಡಿಸುತ್ತಿದ್ದರು
ಕುಂದು ತಾರದೆ ಮಾದರಸನೇ ಒಡೆಯನಾಗಿದ್ದ................೭

ಹತ್ತು ಹನ್ನೊಂದನೆಯ ಶತಕದಿ
ಇತ್ತ ಕನ್ನಡ ನಾಡಿನೆಲ್ಲಡೆ
ಸುತ್ತಿ ಜೈನರ ರಾಜ್ಯದಾಳಿಕೆ ಬೆಳೆಯ ತೊಡಗಲ್ಕೆ
ಒತ್ತಿ ಬಂದ ವಿಧರ್ಮಿ ರಾಜರ
ಮುತ್ತಿ ಅವರನು ಏಳದಂದದಿ
ಗತ್ತಿನಿಂದಲಿ ದೂಡಿ ನಿಂತರು ಇಂಥ ಪರಿಸರದಿ.............೮


ಇಂತ ಸಮಯದಿ ವೀರಶೈವರು
ಚಿಂತೆಯಿಲ್ಲದೆ ಶೈವರೊಂದಿಗೆ
ನಿಂತಿತಲ್ಲರವತ್ತು ಮೂರು ಪುರಾತನರ ಹೆಸರು
ಕಾಂತಿಯುತವಾಗೆಲ್ಲ ಕಡೆಯಲಿ
ಭ್ರಾಂತಿ ಕಳೆದರು ಒಂದೆ ಮನದಲಿ
ಶಾಂತಿ ಕದಡದೆ ಬೆಳಕು ತೋರಿದರೆಲ್ಲ ಕಡೆಯಲ್ಲಿ................೯


ಈ ಪುರಾತನರೆಲ್ಲ ತಮಿಳರು
ಕೋಪ ತಾಪಗಳನ್ನು ಅರಿಯರು
ಈ ಪರಿಯೊಳಿರುತಿರಲು ಕನ್ನಡ ನಾಡಿನಲ್ಲೊಬ್ಬ
ಜಾಪು ಗಾಲನು ಇಡುತ ಬಂದನು
ಭೂಪ ರೇವಣಶಿದ್ದನಾತನು
ದೀಪದಂದದಿ ಬೆಳಗ ತೊಡಗಿದ ಸರ್ವ ಕಡೆಯಲ್ಲಿ.............೧೦


ಕೊಲ್ಲಿ ಪಾಕಿಯೊಳೀತ ಜನಿಸಿದ
ಮೆಲ್ಲನಲ್ಲಿಂದವನು ಚರಿಸಿದ
ನೆಲ್ಲ ಕಡೆಯಲಿ ತಿರುಗಿ ಕೊನೆಕೊನೆಗಿಂಗಳೇಶ್ವರದಿ
ಕಲ್ಲಿನಲಿ ಗವಿ ಕಂಡು ಸೇರಿದ
ನಲ್ಲಿ ತಾಪವನು ಗೈದು ಕೆಲದಿನ
ಬಲ್ಲ ಜನಗಳು ಬರಲು ಭೋಧೆಯ ಮಾಡಿದನು ಅಲ್ಲಿ.............೧೧


ವೀರಶೈವೋದ್ಧಾರ ಕಾರ್ಯವ
ಧೀರತನದಿಂ ಮಾಳ್ಪುದಲ್ಲದೆ
ಸೇರಿ ಸರ್ವರ ಮಧ್ಯ ಧರ್ಮದ ಭೋಧೆ ಮಾಡಿದನು
ಆರು ಅರಿಯದ ಸಾರ ಸತ್ವವ
ಬೀರುತ್ತಿದ್ದನು ಸರ್ವ ಜನರೊಳು
ಕಾರುಣಿಕ ನೆಂದೆಲ್ಲ ಕರೆದರು ದೇವನಿವನೆಂದು ...................೧೨


ಶೈವ ಮತದಾ ದ್ವಿಜಳು ಆದರು ಆದರು
ಭಾವದಲಿ ಮುತ್ತಬ್ಬೆ ತಾರದೆ
ದೈವ ಭಾವವ ಪೊತ್ತು ರೇವಣ ಶಿದ್ದರಲಿ ಬಂದು
ಸೇವೆ ಗೈವಳು ಮುಗಿಸಿ ಕೊನೆಯಲಿ
ಪಾವನಾತ್ಮಕ ನಂದಿಕೇಶ್ವರ
ದೇವ ಮಂದಿರ ಸೇರಿ ಪೂಜೆಯ ಮಾಳ್ಪಳನುದಿನವು.................೧೩


ಇಂತು ಶಿವ ಸಂಸ್ಕಾರ ಪೊಂದುತ
ಸಂತಸದಿ ಕಾಲವನ್ನು ಕಳೆದಳು
ಬಂತು ಮಗ ಕಳಚೂರ್ಯ ಬಿಜ್ಜಳ ಮಾಂತ್ರಿಯೆಂದಾಗ
ಚಿಂತೆಯಾಯಿತು ಮಾದಲಾಂಬಿಕೆ
ಗೆಂತು ವರವನು ಹುಡುಕಲೆನ್ನುವ
ಭ್ರಾಂತಿ ಮುತ್ತಿತು ಮಗಳ ಮಾಂಗಲ್ಯವನು ಕಾಣಲ್ಕೆ ............೧೪


ಮಾದರಸನಿಹ ಬಾಗೇವಾಡಿಯ
ಬೀದಿ ಬದಿಗಿಹ ಮಹಡಿ ಮನೆಯಲಿ
ವೇದ ವೇದಾಂತವನು ಬಲ್ಲವ ನೋಡಿರವನನ್ನು
ಮಾದಲಾಂಬಿಕೆಗೀತ ಯೋಗ್ಯನು
ಕಾದು ಕೂಡ್ರದೆ ಹೋಗಿ ನೋಡಿರಿ
ಸಾಧು ಮಾತಿಗೆ ಮೆಚ್ಚಿ ಬಂದಳು ವರನ ನೋಡಲ್ಕೆ ................೧೫


ಅರಿತುಕೊಂಡರು ಒಬ್ಬರೊಬ್ಬರು
ಹರುಷದಿಂದಲಿ ಒಪ್ಪಿಕೊಂಡರು
ಭರದಿ ಮಂಗಲ ಕಾರ್ಯ ಮುಗಿಸಿದರೀರ್ವರೊಂದಾಗಿ
ಪರಮ ಕುವರರು ಆಕೆಗಿಬ್ಬರು
ಹಿರಿಯ ಪುತ್ರನು ಮಂತ್ರಿಯಾದನು
ಕಿರಿಯ ಪುತ್ರಿಯು ಇಲ್ಲಿ ಸೇರ್ದಳು ಚಿಂತೆ ನೀಗಿದಳು ................೧೬


ಸಕ್ಕೆಯ ಸವಿಮಾತಿನಿಂದಲಿ
ಚಿಕ್ಕ ದಂಪತಿ ಬಾಳು ಸಾಗಿಸೆ
ಉಕ್ಕಿ ಬಂದಿತು ಮಮತೆಯೆಂಬಾ ಕಡಲು ಸರ್ವರಿಗೆ
ತಕ್ಕ ಸಮಯಕೆ ಶಿವನು ಕರುಣಿಸೆ
ಅಕ್ಕ ನಾಗಮ್ಮನನು ಪಡೆದರು
ಅಕ್ಕರತೆಯಿಂ ಜೋಕೆ ಮಾಡಿದರವರು ಒಂದಾಗಿ...........೧೭


ಹೊಂದಿಕೆಯಲತಿ ಮಮತೆಯಿಂದಲಿ
ಒಂದು ಗೂಡಿಯೆ ಬಾಳು ಸಾಗಿಸೆ
ಮುಂದೆ ಒಂದಿನ ಮಾದಲಾಂಬಿಕೆ ಮತ್ತೆ ಹಡೆಯಲ್ಕೆ
ಕಂದನೀಸಲ ಪುಟ್ಟಿ ಬಂದನು
ಮಂದಿ ಮಕ್ಕಳು ದೇವ ರಾಜನು
ಎಂದು ಪೆಸರನು ಇರಿಸಿ ಕರೆದರು ಸಾನುರಾಗದಲಿ.....................೧೮


ಅಂಗಳಕೆ ಮನೆ ರೈತ ಬಂದನು
ಜಂಗು ಕಟ್ಟಿದ ಎತ್ತು ಹೂಡಲು
ಮಂಗಳಾಂಗಿಯು ಹತ್ತಿ ಕುಳಿತಳು ಹೊಲವ ನೋಡಲ್ಕೆ
ಕಂಗಳಿಗೆ ಹಬ್ಬವನ್ನು ನೀಡುವ
ತುಂಗಾ ಬಾಗಿದ ಹೊಡೆಯ ಹಿಡಿಯಲು
ಹೊಂಗನಸಿನಲಿ ವೃಷಭ ಮಿಂಚನು ತೋರಿ ಮರೆಯಾದ ...................೧೯


ನಿಂತ ನಿಲುವಿನಲೆ ಮಾದಲಾಂಬಿಕೆ
ಸಂತಸದ ಸುದ್ದಿಯನು ತನ್ನಯ
ಕಾಂತನಿಗೆ ಪೇಳಿದಳು ಕೇಳುತ ನಕ್ಕು ಮಾದರಸ
ಶಾಂತಿಯಿಂದಲಿ ಇಂತು ಪೇಳಿದ
ಭ್ರಾಂತಿಯಲ್ಲದೆ ಬೇರೆಯೇನಿದೆ
ಚಿಂತೆ ಮಾಡಲು ಬೇಡವೆಂದನು ಆದರೂ ಕೊರಗು...........೨೦



ತನ್ನ ಅನುಭವ ಭರಿಸದಾದಳು
ಅನ್ನ ನೀರಿನ ಪರಿವೆ ತೊರೆದಳು
ಸನ್ನು ತಾಂಗನ ಪಡೆವೆ ಉದರದಿ ಎಂದು ಹಂಬಲದಿ
ಇನ್ನು ನಾನಿದ ಮರೆಯಲಾರೆನು
ಭಿನ್ನವಿಲ್ಲದೆ ಕಂಡುಕೊಳ್ಳುವೆ
ಚನ್ನ ಚಲುವಿನ ದೇವ ವೃಷಭನೆ ಮರೆಯ ಬೇಡೆನ್ನ ..................೨೧


ಎದ್ದು ಬೇಗನೆ ಮಿಂದು ಬಂದಳು
ಶುದ್ದ ಮನಿದಿಂ ಗುಡಿಯ ಸೇರ್ದಳು
ಗದ್ದಲಿಲ್ಲದೆ ಸಂಗಮೇಶ್ವರ ಲಿಂಗದಡಿಯಲ್ಲಿ
ಬಿದ್ದು ಬೇಡುವಳೊಮ್ಮೆ ಭಕ್ತಿಯ
ಹೊದ್ದು ಕೊಂಡೇ ಪುಜೆಗೈವಳು
ಸದ್ದು ಮಾಡದೆ ಬಂದು ವೃಷಭನ ಬೇಡಿಕೊಳ್ಳುವಳು ............೨೨


ದೇವ ದೇವನೆ ವೃಷಭ ದೇವನೆ
ಪಾವನಾತ್ಮಕ ಸಂಗಮೇಶನೆ
ಭಾವನೆಯೆ ನೀ ಬರಿದುಗೊಳಿಸದಿರಯ್ಯ ಬೇಡುವೆನು
ಕಾವದೇವನು ನೀನು ಎನ್ನುವ
ಭಾವನೆಯೆ ನಾನೆಂದು ಮರೆಯನು
ದೈವ ಕೃಪೆಯಿದು ವೆಂಬ ನಿಷ್ಠೆಯು ನನ್ನದಾಗಿಹುದು ................೨೩


ಮನಸಿನೊಳಗಿದ್ದದ್ದು ಒಂದಿನ
ಕನಸಿನಿಂದಲಿ ಹೊರಗೆ ಬರುವುದು
ಜನುಮ ಜನುಮದ ಬಂಧ ತಾನೆ ತೋರ್ಪುದೊಮ್ಮೊಮ್ಮೆ
ಅನುದಿನವು ಹಂಬಲವು ಹೆಚ್ಚಲು
ಸನುಮತಿಸಿದಂತಾಯ್ತು ದಿನದಿನ
ಚಿನುಮಯನೆ ಇದನೆಲ್ಲ ಪರಿಹರಿಪಾತ ನವನೆಂಬೆ ...............೨೪



.....ಮುಂದುವರೆಯುತ್ತೆ

ಶುಕ್ರವಾರ, ಏಪ್ರಿಲ್ 03, 2009

ಬಚ್ಚ ಬರಿಯ ಬೆಳಗು


ಇಂದು ನಾವು ಮುಕ್ತಿ ,ಮೋಕ್ಷ , ಐಕ್ಯ ಇವುಗಳ ಬಗ್ಗೆ ಭ್ರಮೆಯುಳ್ಳೈವರಾಗಿದ್ದೇವೆ. ಮೋಕ್ಷಕ್ಕೆ 'ತನ್ನ' ದಾರಿಯೊಂದೆ ಸರಿ, ಉಳಿದದ್ದೆಲ್ಲ ತಪ್ಪು ದಾರಿಗಳು ಅನ್ನೋ ವಾದವನ್ನು ಕೇಳಿದ್ದೇನೆ. ತನ್ನ ದೇವರೇ ಸರ್ವೋತ್ತಮ, ಹಾಗಾಗಿ ತಾನು ಶ್ರೇಷ್ಠ ,ಉಳಿದವರು ಕೀಳು ಅನ್ನೋ ಕೀಳು ಮತಾಂಧರನ್ನು ಅನೇಕರನ್ನು ನೋಡಿದ್ದೇನೆ.

ಆ ದೇವರ ಒಲುಮೆಗಾಗಿ ಮತ್ತು ಇನ್ನು ಕೆಲವರು ಮುಕ್ತಿಗಾಗಿ ಏನೆಲ್ಲಾ ಸರ್ಕಸ್ ಮಾಡ್ತಾರೆ ಅನ್ನುವುದು ನಮಗೆ ಗೊತ್ತು. ಈ ಸರ್ಕಸ್ಗಳು ಆವಶ್ಯಕವೇ ಅಂತ ಒಮ್ಮೆ ಯೋಚಿಸುವುದು ಒಳ್ಳೆಯದು.

ಅಲ್ಲಮ ಪ್ರಭುಗಳ ವಚನ ನನಗೆ ತುಂಬ ಇಷ್ಟವಾಗುತ್ತೆ. ವಚನವನ್ನು ಇಲ್ಲಿ ಓದಿಕೊಂಡು , ಕೇಳಿ.

ಸುತ್ತಿ ಸುತ್ತಿ ಬಂದಡಿಲ್ಲ, ಲಕ್ಷ್ಯ ಗಂಗೆಯ ಮಿಂದಡಿಲ್ಲ,
ತೊಟ್ಟ ತುದಿಯ ಮೇರು ಗಿರಿಯ ಮೆಟ್ಟಿ ಕೂಗಿದಡಿಲ್ಲಾ ಇಲ್ಲಾ
ನಿತ್ಯ ನೇಮದಿಂದ ತನುವ ಮುಟ್ಟಿ ಕೊಂಡಡಿಲ್ಲಾ
ನಿಚ್ಚಕ್ಕಿನ ಗಮನವಂಗಲ್ಲಿಗೆ
ಅತ್ತಲಿತ್ತ ಹರಿವ ಮನವ ಚಿತ್ತದಲೀ ನಿಲಿಸ ಬಲ್ಲಡೆ
ಬಚ್ಚ ಬರಿಯ ಬೆಳಗು ಗುಹೇಶ್ವರನೆಂಬ ಲಿಂಗವು


Get this widget | Track details | eSnips Social DNA


*ನಿಚ್ಚಕ್ಕಿನ ಗಮನವಂಗಲ್ಲಿಗೆ ... ಈ ಪದದ ಅರ್ಥ ಆಗಲಿಲ್ಲ. ತಿಳಿದವರು ಬರೆಯಿರಿ.

ಬಯಲಿನ ಬಗ್ಗೆ , ಸಮಾಧಿಯ ಬಗ್ಗೆ , ಇನ್ನೂ ಸರಳ ವಾಗಿ ಹೇಳಲು ಆಗದೇನೋ!

ಭಾನುವಾರ, ಮಾರ್ಚ್ 29, 2009

ಉಂಟೆಂಬುದು ಭಾವದ ನೆಂಬುಗೆ, ಇಲ್ಲ ಎಂಬುದು ಚಿತ್ತದ ಪ್ರಕೃತಿ

ಆತ್ಮ / ಪರಮಾತ್ಮ ನಿಜವಾಗಿಯೂ ಇದೆಯಾ? , ಅನ್ನೋ ಪ್ರಶ್ನೆಗಳು ಅನೇಕರಿಗೆ ಎದ್ದಿವೆ. ಶರಣರು ಈ ಬಗ್ಗೆ ಏನು ಹೇಳ್ತಾರೆ ಅಂತ ಒಮ್ಮೆ ಗಮನ ಹರಿಸಿದಾಗ ನನಗೆ ಕಂಡ ಕೆಲವು ವಚನಗಳನ್ನು ಇಲ್ಲಿ ಬರೆಯುತ್ತಾ ಇದ್ದೇನೆ

ಸುಲಿದ ಬಾಳೆ ಹಣ್ಣಿನಂತಹ ಕನ್ನಡದಲ್ಲಿರುವ ಈ ವಚನಗಳು self explanatory . ನಮ್ಮ ಸೀಮಿತ ಅರಿವಿನ ವ್ಯಾಪ್ತಿಯಲ್ಲಿ ಈ ವಚನಗಳನ್ನು ಅರ್ಥ ಮಾಡಿಕೊಂಡರೆ .. ಅವು ಅರ್ಥವಾಗುವುದಕ್ಕಿಂತ ಅಪಾರ್ಥವಾಗುವ ಸಂಭವವೇ ಹೆಚ್ಚು. ಆದರೂ ಈ ವಚನಗಳು ನಮಗೆ ಅವರ ಚಿಂತನೆಯ ಬಗ್ಗೆ ಸ್ವಲ್ಪ ವಾದರೂ ಸುಳಿವನ್ನು ಕೊಡುವುದಾದರೆ ಅದಕ್ಕಿಂತ ಹೆಚ್ಚಿನ ಭಾಗ್ಯವೇನಿಲ್ಲ .

ನನಗೆ ಇಲ್ಲಿ ಶರಣರ ವಚನಗಳು ಏಕೆ ಮುಖ್ಯವಾಗಿತ್ತೆ ಅಂದ್ರೆ ಆವ್ರು ನಮ್ಮ ಕನ್ನಡ ನಾಡಿನಲ್ಲಿ ಹುಟ್ಟಿ ಬೆಳೆದ ಋುಷಿಗಳು. ( ಋಷಿ=ಸತ್ಯವನ್ನು ಅರಸುವವ=seer). ಅವರಲ್ಲಿ ನಾನು ಎಲ್ಲಿಯೂ ಕುರುಡು ಭಕ್ತಿ / ನಂಬಿಕೆಯನ್ನು ಕಂಡಿಲ್ಲ.


1. ಉಂಟೆಂದಡುಂಟು, ಇಲ್ಲ ಎಂದಡೆ, ಅದು ತನ್ನ ವಿಶ್ವಾಸದ ಭಾವ ,
ತನಗೆ ಅನ್ಯಭಿನ್ನವಿಲ್ಲ, ಅರ್ಕೇಶ್ವರ ಲಿಂಗ ತಾನಾದ ಕಾರಣ
.......ಮಧುವಯ್ಯ

2.ಉಂಟೆಂಬ ವಸ್ತು ಇಲ್ಲೆಂಬ ಪ್ರಮಾಣ ಬಹುದು
ಆಚಾರಕ್ಕಿಕ್ಕುವುದಿದು ಭಕ್ತಿಯೆ?
ಉಂಟೆಂಬ ಉಧ್ಭಾವಿಯಲ್ಲ, ಇಲ್ಲೆಂಬ ನಿರ್ಭಾವಿಯಲ್ಲ,
ಇದು ಕಾರಣ ಕೂಡಲಚೆನ್ನಸಂಗಾ
ಸಜ್ಜನ ಶುದ್ದ ಶಿವಾಚಾರಿಗಲ್ಲದೇ ಲಿಂಗೈಕ್ಯವಳವಡದು.

.......ಚೆನ್ನಬಸವಣ್ಣ

3. ಉಂಟೆಂಬಲ್ಲಿಯೇ ಜ್ಞಾನಕ್ಕೆ ದೂರ ; ಇಲ್ಲಾ ಎಂಬಲ್ಲಿಯೇ ಸಮಯಕ್ಕೆ ದೂರ;
ತನುವಿಗೆ ಬಂದ ಪ್ರಾಪ್ತಿಯ ಅನುಭವಿಸುವುದಕ್ಕೆ ಒಡಲಾಯಿತ್ತು
ಪ್ರಾಪ್ತಿಯನುಮ್ಬುದು ಘಟವೋ, ಆತ್ಮನೋ?
ಒಂದನಹುದು, ಒಂದನಲ್ಲಾ ಎನಬಾರದು
ಇಲ್ಲಾ ಎಂದಡೆ ಕ್ರೀವಂತರಿಗೆ ಭಿನ್ನ; ಅಹುದೆಂದಡೆ ಆರಿದಾತಂಗೆ ವಿರೋಧ
ತೆರಪಿಲ್ಲದ ಘನವ ಉಪಮಿಸಲಿಲ್ಲ
ಕಾಮ ಧೂಮ ಧೂಳೇಶ್ವರನ ಮುಂದೆ ಹೋಗಲಿಲ್ಲ , ಹಿಂದೆ ಉಳಿಯಲಿಲ್ಲ.

.......ಧೂಳಯ್ಯ

4.ಉಂಟೆಂಬುದು ಭಾವದ ನೆಂಬುಗೆ, ಇಲ್ಲ ಎಂಬುದು ಚಿತ್ತದ ಪ್ರಕೃತಿ
ಉಭಯಾನಾಮ ನಷ್ಟವಾಗಿ ನಿಂದುಳುಮೆ
ಐಘಟದೂರ ರಾಮೇಶ್ವರಲಿಂಗ ಇಕ್ಕಿದ ಗೊತ್ತು.

.......ಮಿಂಡಯ್ಯ

5. ಉಂಟು ಇಲ್ಲಾ ಎಂಬುನರಿತು ನುಡಿವುದು ಕ್ರೀಯೋ? ನಿಃಕ್ರೀಯೋ ?
ಇವೆಲ್ಲವನರಿತು ನುಡಿವುದು ಘಟದೊಳಗಣ ಮಾತಲ್ಲದೇ ಅದು ಮಾಯಾವಾದದ ಇರವು,
ಭಾವಕಾಯವಲ್ಲಿ ಸಿಕ್ಕಿ ಸಕಲವನಡೊಗೂಡಿ ಭೋಗಂಗಳನುಣುತ
ನಾನಲ್ಲ ಎಂಬ ಮಾಯಾವಾದಿಗಳ ಮಾತು
ಕನ್ನದ ಬಾಯಲ್ಲಿ ಸಿಕ್ಕಿದ ಕಳ್ಳನ ಬಾಯಾಲಿನಂತೆ ಬಲ್ಲವರು ಮೆಚ್ಚುವರೆ?
ಶರೀರವುಳ್ಳನ್ನಕ್ಕ ಇಷ್ಟಪ್ರಾಣ ಮುಕ್ತನಾಗಬೇಕು
ಇದೆ ನಿಶ್ಚಯ , ಸದಾಶಿವಮೂರ್ತಿ ಲಿಂಗವನರಿವುದಕ್ಕೆ.

....... ಮಾರಿತನ್ದೆ

6.ಉಂಟು ಉಂಟೆಂಬನ್ನಕ್ಕ ಸಂದೇಹಕ್ಕೀಡಾಗದೆ ,
ಇಲ್ಲಾ ಇಲ್ಲಾ ಎಂದು ಶೂನ್ಯಕ್ಕೊಳಗಾಗದೆ
ಇಂತೀ ಕ್ರೀಯ ಒಳಗಿನಲ್ಲಿ, ನಿಃಕ್ರೀಯ ತೆರಪಿನಲ್ಲಿ ,
ಉಭಯಚಕ್ಷು ಒಡಗೂಡಿ ಕಾಬಂತೆ ,
ನೋಡುವುದು , ಉಭಯ ನೋಡಿಸಿಕೊಂಬುದು ಒಂದೇ
ಕ್ರೀಯಲ್ಲಿ ಇಷ್ಟ , ಅರಿವಿನಲ್ಲಿ ಸ್ವಸ್ಥ
ಈ ಉಭಯ ನೀನಾಹನ್ನಕ್ಕ ದೃಷ್ಟವಾದೆಯಲ್ಲ ,
ನಿಃಕಳಂಕ ಮಲ್ಲಿಕಾರ್ಜುನಾ .

....... ಮಾರಯ್ಯ

7. ಉಂಟಾದುದು ಉಂಟೆ? ಉಂಟಾದುದನಿಲ್ಲವೆಂಬುದು ಮಿಥ್ಯೆ
ಅದು ತಾ ನಾಮ ರೂಪು ಕ್ರಿಯೆ ಇಲ್ಲವಾಗಿ ಇಲ್ಲ
ಇಲ್ಲವಾದುದನುಂಟೆಂದಡೆ ಘಟಿಸದು ,
ಉಂಟು ಇಲ್ಲವೆಂಬ ಉಳುಮೆಯಿಲ್ಲದೆ ನಿಜ ತಾನೇ , ಸೌರಾಷ್ಟ್ರ ಸೋಮೆಶ್ವರ

.......ಅದಯ್ಯ

೮. ಕಂಡೆ ಕಾಣೆನೆಂಬುದು ಕಂಗಳ ಭ್ರಮೆ
ಕೂಡಿದೆನಗಲಿದೆ ನೆಂಬುದು ಕಾಯದ ಭ್ರಮೆ
ಅರಿದೆನ್ ಅರಿಯದೆನೆಂಬುದು ಚಿದೋಹಂ ಭ್ರಮೆ
ಓದುವೆದಂಗಳ ಜಿನುಗು ಓದು ಮನದ ಭ್ರಮೆ
ಇಹ ಪರಂಗಳನಾಸೆಗೈವುದು ಜೀವ ಭ್ರಮೆ
ಸೌರಾಷ್ಟ್ರ ಸೋಮೆಶ್ವರನ್ನೆಂಬುದು ಸಕಲ ಭ್ರಮೆ

.......ಆದಯ್ಯ

೯. ಅರಿದಡೆ ಆತ್ಮನಲ್ಲ ; ಅರಿಯದಿದ್ದಡೆ ಆತ್ಮನಲ್ಲ;
ತೋರಿತ್ತಾದಡೆ ವಿಷಯ; ತೋರದಿದ್ದಡೆ ಶೂನ್ಯವೆನಿಸುಗು ;
ಬೊಮ್ಮದ ಅರಿವಿನ್ನೆಲ್ಲಿಯದೋ ?
ಅವು ತಾನರಿವಾಗಿದ್ದು , ಸ್ವಾನುಭಾವದ ಹೊರೆಯಲ್ಲಿದ್ದು,
ಸನ್ನಿಧಿ, ನಿತ್ಯನಿಜಾನನ್ದಾತ್ಮ
ಉರಿಲಿಂಗ ಪೆದ್ಡಿ ಪ್ರಿಯ ವಿಶ್ವೇಶ್ವರನೆನ್ದರಿವುದು.

.......ಉರಿಲಿಂಗ ಪೆದ್ಡಿ


ನಾನು ಉಂಟು / ಇಲ್ಲ ಎಂಬುದರ ಬಗ್ಗೆ ಶರಣರು ಏನು ಹೇಳುತ್ತಾರೆ ಎಂಬಲ್ಲಿ ಮಾತ್ರ ಈ ವಚನಗಳಲ್ಲಿ ಗಮನಹರಿಸಿದ್ದೇನೆ. ಇವು ನನ್ನ ಕಣ್ಣಿಗೆ ಬಿದ್ದ ಕೆಲವೇ ಕೆಲವು ವಚನಗಳು.